Select Your Language

Notifications

webdunia
webdunia
webdunia
webdunia

ಭಾರತೀಯ ಸೇನಾ ದಾಳಿ: ಉಗ್ರರಿಗೆ ತಕ್ಕ ಪಾಠ ಎಂದ ಬಿಜೆಪಿ

ಭಾರತೀಯ ಸೇನಾ ದಾಳಿ: ಉಗ್ರರಿಗೆ ತಕ್ಕ ಪಾಠ ಎಂದ ಬಿಜೆಪಿ
ನವದೆಹಲಿ: , ಗುರುವಾರ, 29 ಸೆಪ್ಟಂಬರ್ 2016 (15:16 IST)
ಪಾಕ್ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ನಡೆಸಿದ ಸೀಮಿತ ದಾಳಿಯನ್ನು ಬಿಜೆಪಿ ಸ್ವಾಗತಿಸಿದೆ.
 
ಎಲ್ಲಾ ಉಗ್ರರಿಗೆ ಇದೊಂದು ಪಾಠವಾಗಿದೆ. ಸ್ವಯಂರಕ್ಷಣೆ ನಮ್ಮ ಮೂಲಭೂತ ಹಕ್ಕಾಗಿದೆ. ಸೇನಾದಾಳಿಯಲ್ಲಿ 38 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸಯಾದ್ ಶಾ ನವಾಜ್ ಹುಸೈನ್ ತಿಳಿಸಿದ್ದಾರೆ. 
 
ಡಿಜಿಎಂಓ ರಣಬೀರ್ ಸಿಂಗ್ ಇಂದು ಸುದ್ದಿಗೋಷ್ಠಿಯನ್ನು ಕರೆದು ಭಾರತೀಯ ಸೇನೆ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಕೂಡಾ ಉಪಸ್ಥಿತರಿದ್ದರು. 
 
ಉಗ್ರರ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯ ಬಗ್ಗೆ ಪಾಕಿಸ್ತಾನ ಸೇನೆಗೆ ಮಾಹಿತಿ ನೀಡಲಾಗಿದೆ ಎಂದು ಜನರಲ್ ರಣಬೀರ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ಎಂದರೇನು? - ಪ್ರತಿಯೊಬ್ಬ ಭಾರತೀಯ ಅರಿಯಬೇಕಿದನ್ನು