Select Your Language

Notifications

webdunia
webdunia
webdunia
webdunia

ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಸೋಲುತ್ತಿರುವ ಬೆನ್ನಲ್ಲೇ ಈಗ ‘ಪನೌತಿ’ ಯಾರು ಎಂದು ಪ್ರಶ್ನಿಸಿದ ಬಿಜೆಪಿ

ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಸೋಲುತ್ತಿರುವ ಬೆನ್ನಲ್ಲೇ ಈಗ ‘ಪನೌತಿ’ ಯಾರು ಎಂದು ಪ್ರಶ್ನಿಸಿದ ಬಿಜೆಪಿ
ನವದೆಹಲಿ , ಭಾನುವಾರ, 3 ಡಿಸೆಂಬರ್ 2023 (17:02 IST)
ನವದೆಹಲಿ: ರಾಜಸ್ಥಾನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೊಸಕಿ ಹಾಕಿ ಬಿಜೆಪಿ ಅಧಿಕಾರಕ್ಕೇರುವ ಹಾದಿಯಲ್ಲಿದೆ. ಇದರ ಬೆನ್ನಲ್ಲೇ ಬಿಜೆಪಿ ಚುನಾವಣಾ ಪ್ರಚಾರ ವೇಳೆ ರಾಹುಲ್ ಗಾಂಧಿ ಹೇಳಿದ್ದ ‘ಪನೌತಿ’ ಟಾಂಗ್ ನ್ನು ನೆನಪಿಸಿದೆ.

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಸೋತಿದ್ದಕ್ಕೆ ಮೈದಾನದಲ್ಲಿ ಪನೌತಿ ಇದ್ದಿದ್ದೇ ಕಾರಣ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ರಾಜಸ್ಥಾನ್ ಚುನಾವಣಾ ರಾಲಿಯಲ್ಲಿ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮೋದಿ ಅಪಶಕುನ ಎಂದು ವ್ಯಂಗ್ಯ ಮಾಡಿದ್ದರು.

ಇದೀಗ ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಸೋಲಿನೆಡೆಗೆ ಮುಖ ಮಾಡುತ್ತಿದ್ದಂತೇ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಈಗ ಪನೌತಿ ಯಾರು ಎಂದು ತಿರುಗೇಟು ಕೊಟ್ಟಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಮತ ಸೆಳೆಯಲು ಇಂತಹ ಗಿಮಿಕ್ ಗಳೆಲ್ಲಾ ನಡೆಯದು. ನಿಜವಾದ ಪನೌತಿ ಯಾರು ಎಂದು ಮತದಾರರೇ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

rajasthana Assembly Election Result 2023 Live: ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ 2023 ಲೈವ್