ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿರೋಧಿಸುವ ಮೂಲಕ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಬಿಹಾರ್ ರಾಜ್ಯ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ.
ಯೋಗ ದಿನಾಚರಣೆಯನ್ನು ಮಾಡುವಂತೆ ಕೇಂದ್ರ ಕಳೆದ ವರ್ಷ ಮಾಡಿಕೊಂಡಿದ್ದ ಮನವಿಯನ್ನು ಬಿಹಾರ್ ರಾಜ್ಯ ಸರ್ಕಾರ ನಿರಾಕರಿಸಿತ್ತು.
ಜೆ.ಪಿ. ನಾರಾಯಣ ಅವರ ಪ್ರತಿಮೆ ಮುಂದೆ ನಿತೀಶ್ ತಾವು ನೈಸರ್ಗಿಕ ಔಷಧಿಗೆ ಉತ್ತೇಜನ ನೀಡುತ್ತೇನೆ ಎಂದು ನಿತೀಶ್ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಯೋಗವನ್ನು ಅವರು ವಿರೋಧಿಸುತ್ತಿದ್ದಾರೆ. ಅವರದು ಮತ ಬ್ಯಾಂಕ್ ರಾಜಕೀಯ. ಯೋಗ ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುವುದನ್ನು ಮೊದಲು ನಿಲ್ಲಿಸಿ ಎಂದು ಬಿಜೆಪಿ ನಾಯಕ ಗುಡುಗಿದ್ದಾರೆ.
ಯುಎಇ ಓಲಂಪಿರ್ ಸಮಿತಿ ಆಹ್ವಾನದ ಮೇರೆಗೆ 10,000 ಮುಸ್ಲಿಂ ಮಹಿಳೆಯರಿಗೆ ತರಬೇತಿ ನೀಡಲು ಯೋಗಗುರು ಬಾಬಾ ರಾಮದೇವ್ ಜೂನ್ 18 ರಂದು ದುಬಾಯಿಗೆ ಹೋಗುತ್ತಿದ್ದಾರೆ. ಆದರೆ ನಿತೀಶ್ ಕುಮಾರ್ ಯೋಗಾ ಮುಸ್ಲಿಂ ವಿರೋಧಿ ಎಂದು ಸಾಬೀತುಪಡಿಸಲು ಸಾಂಸ್ಕೃತಿಕ ಅಪರಾಧವನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.