Webdunia - Bharat's app for daily news and videos

Install App

ಜಿಲ್ಲಾಧಿಕಾರಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಸಂಸದೆ

ರಾಮಕೃಷ್ಣ ಪುರಾಣಿಕ
ಬುಧವಾರ, 13 ಡಿಸೆಂಬರ್ 2017 (17:36 IST)
ಬಾರಾಬಂಕಿಯ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್, ಜಿಲ್ಲಾಧಿಕಾರಿ ಅಜಯ್ ಕುಮಾರ್ ದ್ವಿವೇದಿ ಅವರಿಗೆ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಹೋದಾಗ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
“ಬಾರಾಬಂಕಿ ಮೇ ಜೀನಾ ಮುಷ್ಕಿಲ್ ಕರ್ ದುಂಗಿ (ನೀವು ಬಾರಾಬಂಕಿಯಲ್ಲಿ ವಾಸಿಸಲು ಕಷ್ಟಪಡುವಂತೆ ಮಾಡುತ್ತೇನೆ),” ಎಂದು ಐಎಎಸ್ ಟ್ರೇನೀ ಮೇಲೆ ರಾವತ್ ಎಚ್ಚರಿಸಿದ್ದಾರೆ.
 
ರಾವತ್ ಅವರ ಬೆಂಬಲಿಗರು, ಎಸ್‌ಡಿಎಂ ಮತ್ತು ಅವರ ತಂಡದವರು ಬಹುಸಂಖ್ಯೆಯಲ್ಲಿದ್ದಿದ್ದರಿಂದ ಅವರನ್ನು ತೊರೆಯುವಂತೆ ಒತ್ತಾಯಗೊಳಿಸಿದರು. ಅತಿಕ್ರಮಿಸಿದ ಸರಕಾರದ ಭೂಮಿಯನ್ನು ಮುಕ್ತಗೊಳಿಸಲು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಗಳ ಹೊರತಾಗಿಯೂ ಈ ಘಟನೆ ನಡೆದಿದೆ.
 
ಸರ್ಕಾರಿ ಶಾಲೆಗೆ ಸಂಬಂಧಿಸಿದ ಭೂಮಿಯನ್ನು ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರಿಂದ ಅತಿಕ್ರಮಣ ಮಾಡಲಾಗಿತ್ತು. ನಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅವರ ತಂಡವು ಸ್ಥಳಕ್ಕೆ ತಲುಪಿದಾಗ, ಅವರು ಸುತ್ತುವರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಎಸ್‌ಡಿಎಂ ದ್ವಿವೇದಿ ಅವರು ಸ್ಥಳಕ್ಕೆ ತಲುಪಿದರು, ಅಲ್ಲಿ ಅವರಿಗೆ ಸಂಸದ ಪ್ರತಿನಿಧಿ ರಾಜೇಶ್ ವರ್ಮಾ ಎದುರಾದರು.
 
ತೊಂದರೆಯಾಗಬಹುದೆಂದು ಊಹಿಸಿ ದ್ವಿವೇದಿಯವರು ಸ್ಥಳದಿಂದ ನಿರ್ಗಮಿಸಲು ಪ್ರಯತ್ನಿಸಿದರಾದರೂ, ವರ್ಮಾ ಮತ್ತು ರಾವತ್ ಅವರನ್ನು ತಡೆದರು.
 
ಜಿಲ್ಲಾಧಿಕಾರಿ ದ್ವಿವೇದಿ ಮಾತನಾಡಿ,  ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರು ಸರೋವರದ ಮೇಲೆ ಕಾನೂನು ಬಾಹಿರವಾಗಿ ಆಸ್ತಿ ಮತ್ತು ಸರ್ಕಾರಿ ಶಾಲೆಯ ಆಸ್ತಿಯನ್ನು ಅತಿಕ್ರಮಿಸಿದ ವರದಿಗಳಾಗಿವೆ. ಆದ್ದರಿಂದ ನಾವು ಅತಿಕ್ರಮಿಸಿದ ಸ್ಥಳವನ್ನು ತೆಗೆದುಹಾಕಲು ನಾಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೆವು, 
 
ಆದರೆ, ನಮ್ಮ ತಂಡವು ಸಿಂಗ್ ಮತ್ತು ಅವರ ಬೆಂಬಲಿಗರನ್ನು ಎದುರಿಸಬೇಕಾಯಿತು. ಸಂಸದೆ ಪ್ರಿಯಾಂಕಾ ರಾವತ್ ಸಹ ಸ್ಥಳಕ್ಕೆ ತಲುಪಿದರು ಮತ್ತು ಅವರು ನಮ್ಮ ಕೆಲಸಕ್ಕೆ ಅಡ್ಡಿಯಾದರು. ನೂರಾರು ಜನರು ಒಟ್ಟುಗೂಡಿದರು ಮತ್ತು ನಮ್ಮ ಕರ್ತವ್ಯವನ್ನು ಮಾಡದಂತೆ ತಡೆಯುತ್ತಿದ್ದರಿಂದ ನಮ್ಮ ತಂಡವು ಮರಳಬೇಕಾಯಿತು. ಆದರೂ ಸಹ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments