Webdunia - Bharat's app for daily news and videos

Install App

ಜಿಲ್ಲಾಧಿಕಾರಿಗೆ ಜೀವಬೆದರಿಕೆ ಹಾಕಿದ ಬಿಜೆಪಿ ಸಂಸದೆ

ರಾಮಕೃಷ್ಣ ಪುರಾಣಿಕ
ಬುಧವಾರ, 13 ಡಿಸೆಂಬರ್ 2017 (17:36 IST)
ಬಾರಾಬಂಕಿಯ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್, ಜಿಲ್ಲಾಧಿಕಾರಿ ಅಜಯ್ ಕುಮಾರ್ ದ್ವಿವೇದಿ ಅವರಿಗೆ ಸರ್ಕಾರಿ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಹೋದಾಗ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
“ಬಾರಾಬಂಕಿ ಮೇ ಜೀನಾ ಮುಷ್ಕಿಲ್ ಕರ್ ದುಂಗಿ (ನೀವು ಬಾರಾಬಂಕಿಯಲ್ಲಿ ವಾಸಿಸಲು ಕಷ್ಟಪಡುವಂತೆ ಮಾಡುತ್ತೇನೆ),” ಎಂದು ಐಎಎಸ್ ಟ್ರೇನೀ ಮೇಲೆ ರಾವತ್ ಎಚ್ಚರಿಸಿದ್ದಾರೆ.
 
ರಾವತ್ ಅವರ ಬೆಂಬಲಿಗರು, ಎಸ್‌ಡಿಎಂ ಮತ್ತು ಅವರ ತಂಡದವರು ಬಹುಸಂಖ್ಯೆಯಲ್ಲಿದ್ದಿದ್ದರಿಂದ ಅವರನ್ನು ತೊರೆಯುವಂತೆ ಒತ್ತಾಯಗೊಳಿಸಿದರು. ಅತಿಕ್ರಮಿಸಿದ ಸರಕಾರದ ಭೂಮಿಯನ್ನು ಮುಕ್ತಗೊಳಿಸಲು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಗಳ ಹೊರತಾಗಿಯೂ ಈ ಘಟನೆ ನಡೆದಿದೆ.
 
ಸರ್ಕಾರಿ ಶಾಲೆಗೆ ಸಂಬಂಧಿಸಿದ ಭೂಮಿಯನ್ನು ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರಿಂದ ಅತಿಕ್ರಮಣ ಮಾಡಲಾಗಿತ್ತು. ನಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅವರ ತಂಡವು ಸ್ಥಳಕ್ಕೆ ತಲುಪಿದಾಗ, ಅವರು ಸುತ್ತುವರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಎಸ್‌ಡಿಎಂ ದ್ವಿವೇದಿ ಅವರು ಸ್ಥಳಕ್ಕೆ ತಲುಪಿದರು, ಅಲ್ಲಿ ಅವರಿಗೆ ಸಂಸದ ಪ್ರತಿನಿಧಿ ರಾಜೇಶ್ ವರ್ಮಾ ಎದುರಾದರು.
 
ತೊಂದರೆಯಾಗಬಹುದೆಂದು ಊಹಿಸಿ ದ್ವಿವೇದಿಯವರು ಸ್ಥಳದಿಂದ ನಿರ್ಗಮಿಸಲು ಪ್ರಯತ್ನಿಸಿದರಾದರೂ, ವರ್ಮಾ ಮತ್ತು ರಾವತ್ ಅವರನ್ನು ತಡೆದರು.
 
ಜಿಲ್ಲಾಧಿಕಾರಿ ದ್ವಿವೇದಿ ಮಾತನಾಡಿ,  ಬಿಜೆಪಿ ವಿಭಾಗೀಯ ಮುಖ್ಯಸ್ಥ ಅಲೋಕ್ ಸಿಂಗ್ ಅವರು ಸರೋವರದ ಮೇಲೆ ಕಾನೂನು ಬಾಹಿರವಾಗಿ ಆಸ್ತಿ ಮತ್ತು ಸರ್ಕಾರಿ ಶಾಲೆಯ ಆಸ್ತಿಯನ್ನು ಅತಿಕ್ರಮಿಸಿದ ವರದಿಗಳಾಗಿವೆ. ಆದ್ದರಿಂದ ನಾವು ಅತಿಕ್ರಮಿಸಿದ ಸ್ಥಳವನ್ನು ತೆಗೆದುಹಾಕಲು ನಾಯಾಬ್ ತಹಸೀಲ್ದಾರ್ ಮತ್ತು ಆದಾಯ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೆವು, 
 
ಆದರೆ, ನಮ್ಮ ತಂಡವು ಸಿಂಗ್ ಮತ್ತು ಅವರ ಬೆಂಬಲಿಗರನ್ನು ಎದುರಿಸಬೇಕಾಯಿತು. ಸಂಸದೆ ಪ್ರಿಯಾಂಕಾ ರಾವತ್ ಸಹ ಸ್ಥಳಕ್ಕೆ ತಲುಪಿದರು ಮತ್ತು ಅವರು ನಮ್ಮ ಕೆಲಸಕ್ಕೆ ಅಡ್ಡಿಯಾದರು. ನೂರಾರು ಜನರು ಒಟ್ಟುಗೂಡಿದರು ಮತ್ತು ನಮ್ಮ ಕರ್ತವ್ಯವನ್ನು ಮಾಡದಂತೆ ತಡೆಯುತ್ತಿದ್ದರಿಂದ ನಮ್ಮ ತಂಡವು ಮರಳಬೇಕಾಯಿತು. ಆದರೂ ಸಹ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments