Select Your Language

Notifications

webdunia
webdunia
webdunia
webdunia

ಪ್ರತಾಪ್‌ಸಿಂಹಗೆ ಐಪಿಎಸ್ ಅಧಿಕಾರಿ ರೂಪಾ ತಿರುಗೇಟು

ಪ್ರತಾಪ್‌ಸಿಂಹಗೆ ಐಪಿಎಸ್ ಅಧಿಕಾರಿ ರೂಪಾ ತಿರುಗೇಟು
ಬೆಂಗಳೂರು , ಶುಕ್ರವಾರ, 17 ಮಾರ್ಚ್ 2017 (15:23 IST)
ಪ್ರತಿಪಕ್ಷವಾಗಿ ನೀವು ನಿಮ್ಮ ಕರ್ತವ್ಯ ನಿರ್ವಹಿಸಿ. ಅಧಿಕಾರಿಯಾಗಿ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ನಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್‌ಸಿಂಹಗೆ ಐಪಿಎಸ್ ಅಧಿಕಾರಿ ರೂಪಾ ತಿರುಗೇಟು ನೀಡಿದ್ದಾರೆ.
ಬಂದಿಖಾನೆ ಡಿಐಜಿಯಾಗಿರುವ ಡಿ.ರೂಪಾ ಫೇಸ್‌ಬುಕ್ ಪೋಸ್ಟ್ ಮಾಡಿ, ರಾಜ್ಯ ಸರಕಾರದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ, ಗೌರವ ದೊರೆಯುತ್ತಿದೆ. ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 
 
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಉತ್ತಮ ಸ್ಥಾನ ದೊರೆಯುತ್ತಿಲ್ಲವಾದ್ದರಿಂದ ಕೇಂದ್ರಕ್ಕೆ ಗುಳೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು.
 
ನಾಲ್ವರು ಐಪಿಎಸ್ ಅಧಿಕಾರಿಗಳು ಕೇಂದ್ರ ಸೇವೆಗಾಗಿ ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು. ಇದೀಗ ಪ್ರತಾಪ್ ಸಿಂಹ್ ಸ್ಪಷ್ಟನೆ ನೀಡಿ ತಪ್ಪು ಗ್ರಹಿಕೆಗೆ ವಿರಾಮ ಹೇಳಿದ್ದಾರೆ 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರದಿಂದ ಉ.ಪ್ರದೇಶ ರೈತರ ಸಾಲ ಮನ್ನಾ: ರಾಜ್ಯದಲ್ಲಿ ರೈತರ ಆಕ್ರೋಶ