Webdunia - Bharat's app for daily news and videos

Install App

ಸೀಮೆಎಣ್ಣೆ ಸುರಿದು ಶಾಸಕನ ಸಜೀವ ದಹನ ಯತ್ನ

Webdunia
ಶುಕ್ರವಾರ, 27 ಜನವರಿ 2017 (14:16 IST)
20 ವರ್ಷದ ಯುವಕನೋರ್ವ ಬಿಜೆಪಿ ಶಾಸಕನನ್ನು ಸಜೀವವಾಗಿ ಸುಡಲೆತ್ನಿಸಿದ ಬೆಚ್ಚಿ ಬೀಳಿಸುವ ಘಟನೆ ರಾಜಸ್ಥಾನದ ಬರನ್ ಜಿಲ್ಲೆಯಲ್ಲಿ ನಡೆದಿದೆ. 
ಬರನ್ ಶಾಸಕ ಅತ್ರು ರಾಮ್‌ಪಾಲ್ ಮೇಘವಾಲ್ ಬುಧವಾರ ಸಂಜೆ ನಗರಕ್ಕೆ ಭೇಟಿ ನೀಡಿದ್ದರು. ಏಕಾಏಕಿ ಅವರ ಸನಿಹಕ್ಕೆ ಬಂದ ಯುವಕನೋರ್ವ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ಮೇಘವಾಲ್ ಮೇಲೆ ಹೊತ್ತಿ ಉರಿಯುವಂತ ಎಣ್ಣೆಯನ್ನು ತೋಕಿದ್ದಾನೆ. ಬಳಿಕ ಬೆಂಕಿಕಡ್ಡಿ ಗೀರಲು ಯತ್ನಿಸುತ್ತಿದ್ದ ಆತನನ್ನು ತಕ್ಷಣ ಶಾಸಕರ ಬೆಂಬಲಿಗರು ಆತನನ್ನು ಎಳೆದು ನಡೆಯಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. 
 
ಆರೋಪಿಯನ್ನು ಚರವ್ ಸಕ್ಷೇನಾ ಎಂದು ಗುರುತಿಸಲಾಗಿದ್ದು  ಪರಾರಿಯಾಗಿರುವ ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಮೇಘವಾಲ್, 'ಇದು ರಾಜಕೀಯ ಪ್ರೇರಿತ ಪಿತೂರಿ' ಎಂದಿದ್ದಾರೆ. 
 
ಶಾಸಕ ನೀಡಿರುವ ದೂರಿನ ಅನ್ವಯ ಪೊಲೀಸರು ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments