Select Your Language

Notifications

webdunia
webdunia
webdunia
webdunia

ಉಪಚುನಾವಣೆಯಲ್ಲಿ ಗೆದ್ರೆ ಒಳ್ಳೆ ಬೀಫ್ ಸರಬರಾಜು ಮಾಡಿಸ್ತೀನೆಂದ ಬಿಜೆಪಿ ಅಭ್ಯರ್ಥಿ

ಉಪಚುನಾವಣೆಯಲ್ಲಿ ಗೆದ್ರೆ ಒಳ್ಳೆ ಬೀಫ್ ಸರಬರಾಜು ಮಾಡಿಸ್ತೀನೆಂದ ಬಿಜೆಪಿ ಅಭ್ಯರ್ಥಿ
ತಿರುವನಂತಪುರ , ಸೋಮವಾರ, 3 ಏಪ್ರಿಲ್ 2017 (11:41 IST)
ಕೇರಳದ ಮಲಪ್ಪುರಂ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶ್ರೀಪ್ರಕಾಶ್ ತಮ್ಮ ಹೇಳಿಕೆ ಮೂಲಕ ರಾಜಕೀಯ ನಾಯಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

ನಾನು ಚುನಾವಣೆಯಲ್ಲಿ ಗೆದ್ದು ಬಂದರೆ ಶುದ್ಧವಾದ ಕಸಾಯಿಖಾನೆಗಳನ್ನ ಒಳ್ಳೆಯ ಗುಣಮಟ್ಟದ ಬೀಫ್ ಸರಬರಾಜು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಮುಸಲ್ಮಾನರೇ ಅಧಿಕ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಮತದಾರರ ಓಲೈಕೆಗೆ ಶ್ರೀಪ್ರಕಾಶ್ ಈ ಹೇಳಿಕೆ ನೀಡಿದ್ದಾರೆ.

ದೇಶದ ಹಲವೆಡೆ ಬಿಜೆಪಿ ಸರ್ಕಾರಗಳು ಗೋಹತ್ಯೆ ನಿಷೇಧಕ್ಕೆ ಕ್ರಮ ಕೈಗೊಳ್ಳುತ್ತಿವೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಕಸಾಯಿಖಾನೆಗಳ ವಿರುದ್ಧ ಸಮರ ಸಾರಿದ್ದಾರೆ. ಗುಜರಾತ್`ನಲ್ಲಿ ಗೋಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆಯ ಕಾನೂನು ಜಾರಿಗೆ ತರಲಾಗಿದೆ. ಹೀಗಾಗಿ, ಕೇರಳದ ಬಿಜೆಪಿ ಮುಖಂಡನ ಹೇಳಿಕೆ ಗೊಂದಲ ಮೂಡಿಸಿದೆ. ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಶ್ರೀಪ್ರಕಾಶ್, ಪ್ರತಿಯೊಬ್ಬ ವ್ಯಕ್ತಿಯ ಆಹಾರ ಅವರಿಷ್ಟ ಎಂದಿದ್ಧಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪನನ್ನು ಏಕವಚನದಲ್ಲಿ ನಿಂದಿಸಿದ ಸಿಎಂ ಸಿದ್ಧರಾಮಯ್ಯ