ಬಿಹಾರ್ ರಾಜ್ಯದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ರನ್ನು ಮುಂದಿನ ಬಾರಿ ಮುಖ್ಯಮಂತ್ರಿಯಾಗಿಸುವುದೇ ನಮ್ಮ ಗುರಿ ಎಂದು ಆರ್ಜೆಡಿ ಯುವ ವಿಭಾಗ ಭಾರಿ ಪ್ರಚಾರ ಆರಂಭಿಸಿದೆ.
ರಾಷ್ಟ್ರೀಯ ಜನತಾದಳದ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಭಾಗಲ್ಪುರ್ ಸಂಸದ ಶೈಲೇಶ್ ಕುಮಾರ್ ಅಲಿಯಾಸ್ ಬುಲೋ ಮಂಡಲ್, ತೇಜಸ್ವಿ ಯಾದವ್ರನ್ನು ಮುಂದಿನ ಮುಖ್ಯಮಂತ್ರಿಯಾಗಿಸಲು ಪ್ರಚಾರ ಕಾರ್ಯ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಿಹಾರ್ ರಾಜ್ಯದಲ್ಲಿ ಪ್ರತಿಯೊಬ್ಬ ಯುವಕ ತೇಜಸ್ವಿ ಯಾದವ್ ಮುಂದಿನ ಸಿಎಂ ಹುದ್ದೆಯನ್ನೇರಲಿ ಎಂದು ಬಯಸುತ್ತಿದ್ದಾರೆ. ಯುವಕರ ಕನಸನ್ನು ನನಸಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ತೇಜಸ್ವಿ ಯಾದವ್ ಪ್ರಸಕ್ತ ವಿಧಾನಸಭೆಯಲ್ಲಿಯೇ ಸಿಎಂ ಆಗಲಿದ್ದಾರೆಯೇ ಅಥವಾ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಹುದ್ದೆಯನ್ನು ಅಲಂಕರಿಸಲಿದ್ದಾರೆಯೇ ಎನ್ನುವ ಬಗ್ಗೆ ಮಂಡಲ್ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.
ರಾಷ್ಟ್ರೀಯ ಜನತಾದಳದ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಭಾಗಲ್ಪುರ್ ಸಂಸದ ಶೈಲೇಶ್ ಕುಮಾರ್ ಅವರ ವೈಯಕ್ತಿಕ ಗುರಿಗಳಿಗಾಗಿ ಮಹಾಮೈತ್ರಿಕೂಟದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ