Select Your Language

Notifications

webdunia
webdunia
webdunia
webdunia

ಸಿಬಿಐ ದಾಳಿಯ ದಾಳಕ್ಕೆ ಉರುಳಿದ ಬಿಹಾರದ ಮಿತ್ರರು

ಸಿಬಿಐ ದಾಳಿಯ ದಾಳಕ್ಕೆ ಉರುಳಿದ ಬಿಹಾರದ ಮಿತ್ರರು
Patna , ಶನಿವಾರ, 8 ಜುಲೈ 2017 (11:49 IST)
ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಕುಟುಂಬದ ಆಸ್ತಿ-ಪಾಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸುವುದರೊಂದಿಗೆ ಬಿಹಾರ ರಾಜಕೀಯದಲ್ಲಿ ಮಹಾ ಬಿರುಕು ಮೂಡಿದೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಉಂಟಾದ ಒಡಕು ದೊಡ್ಡದಾಗುವ ಸಂಭವ ಕಾಣುತ್ತಿದೆ.


ಸಿಬಿಐ ದಾಳಿ ನಡೆಯುವ ಮೊದಲೇ ಬಿಹಾರ ಮೈತ್ರಿ ಸರ್ಕಾರದ ಸಿಎಂ ನಿತೀಶ್ ಕುಮಾರ್ ಗೆ ಕೇಂದ್ರ ಮೊದಲೇ ಸೂಚನೆ ನೀಡಿತ್ತಂತೆ. ಲಾಲೂ ಮನೆ ಮೇಲೆ ದಾಳಿ ನಡೆಯುವಾಗ ಆರ್ ಜೆಡಿ ಸದಸ್ಯರು ಗದ್ದಲ ಎಬ್ಬಿಸದಿರಲಿ ಎಂದು ಮೊದಲೇ ಸನ್ನದ್ಧವಾಗಿರುವಂತೆ ಸೂಚನೆ ನೀಡಿತ್ತಂತೆ. ಇದು ಲಾಲೂ ಯಾದವ್ ಮತ್ತಷ್ಟು ಕೋಪಗೊಳ್ಳಲು ಕಾರಣವಾಗಿದೆ.

ಸಿಬಿಐ ದಾಳಿ ನಡೆಸಿರುವುದರ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ಕೈವಾಡವಿದೆ ಎಂದು ಲಾಲೂ ಆರೋಪಿಸಿದ್ದಾರೆ. ಇದೀಗ ಸಿಬಿಐ ದಾಳಿ ನಡೆದರೂ ಸುಮ್ಮನಿದ್ದ ಮಿತ್ರ ಪಕ್ಷ ಜೆಡಿಯು ಮೇಲೆ ಲಾಲೂ ಮುನಿಸಿಕೊಳ್ಳುವುದು ಸಹಜ. ಹಾಗಾಗಿ ಬಿಹಾರದಲ್ಲಿ ಮಹಾ ಮೈತ್ರಿಯೊಂದು ಮುರಿದು ಬೀಳುವ ಹಂತಕ್ಕೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಿಂಕ್ ಬಾಂಬ್ ಎಂದರೇನು ಗೊತ್ತಾ.. ಸೇನೆ ಇದನ್ನು ಉಪಯೋಗಿಸಲು ಮುಂದಾಗಿರುವುದೇಕೆ..?