Select Your Language

Notifications

webdunia
webdunia
webdunia
webdunia

ವಂಚನೆ ಪ್ರಕರಣ ರದ್ದು: ಡಿವಿಎಸ್ ಪುತ್ರನಿಗೆ ಬಿಗ್ ರಿಲೀಫ್

ವಂಚನೆ ಪ್ರಕರಣ ರದ್ದು: ಡಿವಿಎಸ್ ಪುತ್ರನಿಗೆ ಬಿಗ್ ರಿಲೀಫ್
ಬೆಂಗಳೂರು , ಶುಕ್ರವಾರ, 16 ಡಿಸೆಂಬರ್ 2016 (11:15 IST)
ವಂಚನೆ ಪ್ರಕಣದಲ್ಲಿ ಸಿಲುಕಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಮೇಲೆ ದಾಖಲಾಗಿದ್ದ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

 
ಆರ್ ಟಿ ನಗರ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನ್ನು ರದ್ದುಗೊಳಿಸುವಂತೆ ಕಾರ್ತಿಕ್ ಕೋರ್ಟ್ ಮೆಟ್ಟಿಲೇರಿದ್ದರು. ಮತ್ತೀಗ ಅದನ್ನು ಹೈಕೋರ್ಟ್ ಪೀಠ ರದ್ದುಗೊಳಿಸಿದ್ದು ಕಾರ್ತಿಕ್ ಗೌಡ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮೈತ್ರಿಯಾ ಹೇಳಿಕೆ ಮತ್ತು ದೂರಿನಲ್ಲಿದ್ದ ಗೊಂದಲ ಮತ್ತು ವೈದ್ಯಕೀಯ ವರದಿಯನ್ನು ಆಧರಿಸಿ ಕೋರ್ಟ್ ಈ ತೀರ್ಮಾನವನ್ನು ಕೈಗೊಂಡಿದೆ.
 
ನಟಿ ಮೈತ್ರಿಯಾ ಗೌಡ ಕಾರ್ತಿಕ್ ತಮಗೆ ವಂಚಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ವಿವಾಹ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಕಾಲದಿಂದ ಈ ಪ್ರಕರಣ ವಂಚನೆಗೊಳಗಾಗಿತ್ತು.
 
ಮೊದಲು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದ ಮೈತ್ರಿಯಾ ಬಳಿಕ ನಮ್ಮಿಬ್ಬರ ಮದುವೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗಳಲ್ಲಿಯೇ ವೈರುಧ್ಯಗಳಿದ್ದವು. ಮದುವೆಯಾದ ಮೇಲೆ ಅತ್ಯಾಚಾರದ ಪ್ರಶ್ನೆ ಎಲ್ಲಿಂದ ಎಂಬುದು ಕೋರ್ಟ್‌ ಕೇಳಿದ ಪ್ರಶ್ನೆಯಾಗಿತ್ತು. 
 
ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಕಾರ್ತಿಕ್ ಬೇರೊಬ್ಬ ಯುವತಿಯ ಜತೆ ಮದುವೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

’ಮನಿಟಾಪ್’ ಆಪ್‌ನೊಂದಿಗೆ ಸಾಲ ಸೌಲಭ್ಯ!