Select Your Language

Notifications

webdunia
webdunia
webdunia
webdunia

ಪ್ರತಿಭಟನೆ ಕೈಬಿಟ್ಟ ಮೆಟ್ರೋ ಸಿಬ್ಬಂದಿ: ಮೆಟ್ರೋ ರೈಲು ಸಂಚಾರ ಆರಂಭ

ಪ್ರತಿಭಟನೆ ಕೈಬಿಟ್ಟ ಮೆಟ್ರೋ ಸಿಬ್ಬಂದಿ: ಮೆಟ್ರೋ ರೈಲು ಸಂಚಾರ ಆರಂಭ
ಬೆಂಗಳೂರು , ಶುಕ್ರವಾರ, 7 ಜುಲೈ 2017 (12:42 IST)
ಮೆಟ್ರೋ ಸಿಬ್ಬಂದಿ ಜೊತೆ ಹೊರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಪ್ರತಿಭಟನೆ ಕೈಬಿಟ್ಟ ಮೆಟ್ರೋ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು, ಮೆಟ್ರೋ ರೈಲು ಸಂಚಾರ ಆರಂಭವಾಗಿದೆ.

ಬಂಧಿಸಿರುವ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವುದಿಲ್ಲ. ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ಮುಂದಿನ ವಾರ ಬಿಎಂಆರ್`ಸಿಎಲ್ ಸಿಬ್ಬಂದಿ ಸಭೆ ಕರೆದು ಕುಂದು ಕೊರತೆ ಬಗ್ಗೆ ಚರ್ಚೆ ನಡೆಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೀಡಿದ ಭರವಸೆ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿ ಪ್ರತಿಭಟನೆ ಹಿಂಪಡೆದಿದ್ದಾರೆ.

ನಿನ್ನೆ ಕೆಐಎಸ್ಎಫ್ ಸಿಬ್ಬಂದಿ ಮತ್ತು ಬಿಎಂಆರ್`ಸಿಎಲ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಘಟನೆ ಬಳಿಕ 6 ಮಂದಿ ಬಿಎಂಆರ್`ಸಿಎಲ್ ಸಿಬ್ಬಂದಿಯನ್ನ ಬಂಧಿಸಲಾಗಿತ್ತು. ಬಂಧನ ಖಂಡಿಸಿ ಮೆಟ್ರೋ ರೈಲು ಸಿಬ್ಬಂದಿ ಕೆಲಸ ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಮೆಟ್ರೋ ಸಿಬ್ಬಂದಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುವ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನಿರ್ಧಾರ ಹಿಂಪಡೆದ ಶಾಸಕ ಸುಧಾಕರ್ ರೆಡ್ಡಿ