ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟ್ ಬ್ಯಾನ್ ಜಾರಿಗೊಳಿಸುವ ಮುನ್ನ ನಗುತ್ತಿದ್ದರು, ಈಗ ಅಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರದಾನಮಂತ್ರಿ ಮೋದಿ ಸಂಸತ್ತಿನಲ್ಲಿ ಹಾಜರಾಗಿ ನೋಟು ನಿಷೇಧ ಜಾರಿಗೊಳಿಸುವ ಬಗ್ಗೆ ಯಾರು ಯಾರಿಗೆ ಮಾಹಿತಿ ನೀಡಿದ್ದರೂ ಎನ್ನುವುದನ್ನು ಲೋಕಸಭೆಗೆ ತಿಳಿಸಬೇಕು. ಆವಾಗ ಸತ್ಯ ಸಂಗತಿ ತಾನಾಗಿ ಹೊರಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪ್ರದಾನಿ ಮೋದಿ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ, ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ನೋಟು ನಿಷೇಧ ಕುರಿತಂತೆ ಹೇಳಿಕೆ ನೀಡುವುದರಿಂದ ಯಾವುದೇ ಲಾಭವಾಗದು. ಧೈರ್ಯವಿದ್ದರೆ ಸಂಸತ್ತಿನಲ್ಲಿ ಬಂದು ಹೇಳಿಕೆ ನೀಡಲಿ ಎಂದು ಸವಾಲ್ ಹಾಕಿದರು.
ಲೋಕಸಭೆಯ ಕಲಾಪ ಆರಂಭವಾಗಿ ಒಂದು ವಾರ ಕಳೆದರೂ ನವದೆಹಲಿಯಲ್ಲಿಯೇ ಇರುವ ಮೋದಿ ಸಂಸತ್ತಿಗೆ ಬಂದು ನೋಟು ನಿಷೇಧ ಕುರಿತಂತೆ ಯಾಕೆ ಹೇಳಿಕೆ ನೀಡುತ್ತಿಲ್ಲ ಎನ್ನುವುದು ಮೂಲ ಪ್ರಶ್ನೆಯಾಗಿದೆ. ತಪ್ಪು ಮಾಡಿದ್ದರಿಂದಲೇ ಅವರಿಗೆ ಹೇಳಿಕೆ ನೀಡುವುದು ಕಷ್ಟಸಾಧ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ