Webdunia - Bharat's app for daily news and videos

Install App

ಮಹಿಳಾ ವಶೀಕರಣ ಹೆಸರಲ್ಲಿ ಮಂತ್ರವಾದಿಯಿಂದ ಯುವಕನಿಗೆ ಮೋಸ

Webdunia
ಶುಕ್ರವಾರ, 25 ನವೆಂಬರ್ 2016 (13:33 IST)
ಮಹಿಳೆಯರನ್ನು ವಶೀಕರಣಗೊಳಿಸಿ ಕೊಡ್ತೇನೆ ಎಂದು ಮಂತ್ರವಾದಿಯೊಬ್ಬ ಯುವಕನೊಬ್ಬನಿಗೆ ವಂಚಿಸಿದ ಘಟನೆ ವರದಿಯಾಗಿದೆ.
 
ಮೈಸೂರಿನ ನಂಜಮಳಿಗೆ ಪ್ರದೇಶದ ನಿವಾಸಿಯಾಗಿರುವ ಬಾಬಾ ಕಬೀರ್ ಖಾನ್ ಎಂಬ ಮಂತ್ರವಾದಿ, ಮಹಿಳೆಯರ ವಶೀಕರಣಕ್ಕೆ ಪೂಜೆ ಮಾಡಿದಲ್ಲಿ ಫಲ ಲಭಿಸುತ್ತದೆ ಎಂದು ಯುವಕನನ್ನು ನಂಬಿಸಿದ್ದನು ಎನ್ನಲಾಗಿದೆ.
 
ಬಾಬಾ ಕಬೀರ್ ಖಾನ್ ತನ್ನ ಮನೆಯಲ್ಲಿ ಪಂಚಲೋಹಗಳ ಪೂಜೆ ನೆರವೇರಿಸಬೇಕು ಅದಕ್ಕಾಗಿ 250 ಗ್ರಾಂ ಚಿನ್ನ 250 ಗ್ರಾಂ ಬೆಳ್ಳಿ 250 ಗ್ರಾಂ ತಾಮ್ರ ತರುವಂತೆ ಕೋರಿದ್ದ. ಮಹಿಳೆಯರನ್ನು ವಶೀಕರಣಗೊಳಿಸಿಕೊಳ್ಳುವ ಆಸೆಯಿಂದ ಯುವಕನು ಮಂತ್ರವಾದಿ ಹೇಳಿದಂತೆ ನಡೆದಿದ್ದ.
 
ಮಂತ್ರವಾದಿ ಬಾಬಾ 250 ಗ್ರಾಂ ಚಿನ್ನ 250 ಗ್ರಾಂ ಬೆಳ್ಳಿ 250 ಗ್ರಾಂ ತಾಮ್ರವನ್ನು ಮಡಿಕೆಯಲ್ಲಿ ಹಾಕಿಟ್ಟು ಪೂಜೆ ಮಾಡಿ ನಂತರ ಯುವಕನಿಗೆ ತನ್ನ ಮನೆಗೆ ಮಡಿಕೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ದಾರಿಯಲ್ಲಿ ಮಾತನಾಡಬಾರದು. ಮಾತನಾಡಿದರೆ ಪೂಜೆ ಫಲಿಸಲ್ಲ ಎಂದು ಹೆದರಿಸಿದ್ದ.
 
ಯುವಕ ಮನೆಗೆ ಹೋಗಿ ನೋಡಿದಾಗ ಮಡಿಕೆಯಲ್ಲಿ ಕಲ್ಲಿದ್ದಲು ಚೂರುಗಳು ಕಂಡು ಬಂದಿವೆ. ಇದರಿಂದ ಆಕ್ರೋಶಗೊಂಡ ಯುವಕ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಮಂತ್ರವಾದಿ ಬಾಬಾ ಕಬೀರ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್ ಕೇಂದ್ರ ಸಚಿವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್‌, ಕಾರಣ ಹೀಗಿದೆ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಬಾಲಕಿ ಮೇಲೆ ಅತ್ಯಾಚಾರ: 20ವರ್ಷ ಜೈಲು

ಮೊದಲ ಹಂತದಲ್ಲೇ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ: ಮಧು ಬಂಗಾರಪ್ಪ

ಏರ್‌ ಇಂಡಿಯಾ ವಿಮಾನ ಅಪಘಾತ: ಕೊನೆಗೂ ಪ್ರಾಥಮಿಕ ವರದಿ ಸಿದ್ದ, 2 ಪುಟಗಳ ವರದಿ ಸಲ್ಲಿಕೆ

ಹುಬ್ಬಳ್ಳಿ- ಧಾರವಾಡದ 65 ಪೊಲೀಸ್ ಅಧಿಕಾರಿಗಳಿಗೆ ಬೊಜ್ಜು ಕರಗಿಸುವ ಟ್ರೈನಿಂಗ್,4ರಿಂದ 11ಕೆಜಿ ಇಳಿಕೆ

ಮುಂದಿನ ಸುದ್ದಿ
Show comments