Webdunia - Bharat's app for daily news and videos

Install App

ಮಹಿಳಾ ವಶೀಕರಣ ಹೆಸರಲ್ಲಿ ಮಂತ್ರವಾದಿಯಿಂದ ಯುವಕನಿಗೆ ಮೋಸ

Webdunia
ಶುಕ್ರವಾರ, 25 ನವೆಂಬರ್ 2016 (13:33 IST)
ಮಹಿಳೆಯರನ್ನು ವಶೀಕರಣಗೊಳಿಸಿ ಕೊಡ್ತೇನೆ ಎಂದು ಮಂತ್ರವಾದಿಯೊಬ್ಬ ಯುವಕನೊಬ್ಬನಿಗೆ ವಂಚಿಸಿದ ಘಟನೆ ವರದಿಯಾಗಿದೆ.
 
ಮೈಸೂರಿನ ನಂಜಮಳಿಗೆ ಪ್ರದೇಶದ ನಿವಾಸಿಯಾಗಿರುವ ಬಾಬಾ ಕಬೀರ್ ಖಾನ್ ಎಂಬ ಮಂತ್ರವಾದಿ, ಮಹಿಳೆಯರ ವಶೀಕರಣಕ್ಕೆ ಪೂಜೆ ಮಾಡಿದಲ್ಲಿ ಫಲ ಲಭಿಸುತ್ತದೆ ಎಂದು ಯುವಕನನ್ನು ನಂಬಿಸಿದ್ದನು ಎನ್ನಲಾಗಿದೆ.
 
ಬಾಬಾ ಕಬೀರ್ ಖಾನ್ ತನ್ನ ಮನೆಯಲ್ಲಿ ಪಂಚಲೋಹಗಳ ಪೂಜೆ ನೆರವೇರಿಸಬೇಕು ಅದಕ್ಕಾಗಿ 250 ಗ್ರಾಂ ಚಿನ್ನ 250 ಗ್ರಾಂ ಬೆಳ್ಳಿ 250 ಗ್ರಾಂ ತಾಮ್ರ ತರುವಂತೆ ಕೋರಿದ್ದ. ಮಹಿಳೆಯರನ್ನು ವಶೀಕರಣಗೊಳಿಸಿಕೊಳ್ಳುವ ಆಸೆಯಿಂದ ಯುವಕನು ಮಂತ್ರವಾದಿ ಹೇಳಿದಂತೆ ನಡೆದಿದ್ದ.
 
ಮಂತ್ರವಾದಿ ಬಾಬಾ 250 ಗ್ರಾಂ ಚಿನ್ನ 250 ಗ್ರಾಂ ಬೆಳ್ಳಿ 250 ಗ್ರಾಂ ತಾಮ್ರವನ್ನು ಮಡಿಕೆಯಲ್ಲಿ ಹಾಕಿಟ್ಟು ಪೂಜೆ ಮಾಡಿ ನಂತರ ಯುವಕನಿಗೆ ತನ್ನ ಮನೆಗೆ ಮಡಿಕೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ದಾರಿಯಲ್ಲಿ ಮಾತನಾಡಬಾರದು. ಮಾತನಾಡಿದರೆ ಪೂಜೆ ಫಲಿಸಲ್ಲ ಎಂದು ಹೆದರಿಸಿದ್ದ.
 
ಯುವಕ ಮನೆಗೆ ಹೋಗಿ ನೋಡಿದಾಗ ಮಡಿಕೆಯಲ್ಲಿ ಕಲ್ಲಿದ್ದಲು ಚೂರುಗಳು ಕಂಡು ಬಂದಿವೆ. ಇದರಿಂದ ಆಕ್ರೋಶಗೊಂಡ ಯುವಕ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಮಂತ್ರವಾದಿ ಬಾಬಾ ಕಬೀರ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments