Select Your Language

Notifications

webdunia
webdunia
webdunia
webdunia

ರಸ್ತೆಯಲ್ಲಿ ಉರುಳಿಬಿದ್ದ ಬಿಯರ್ ಲಾರಿ: ಬಿಯರ್ ಬಾಟಲ್`ಗೆ ಮುಗಿಬಿದ್ದ ಜನ

ರಸ್ತೆಯಲ್ಲಿ ಉರುಳಿಬಿದ್ದ ಬಿಯರ್ ಲಾರಿ: ಬಿಯರ್ ಬಾಟಲ್`ಗೆ ಮುಗಿಬಿದ್ದ ಜನ
ತುಮಕೂರು , ಬುಧವಾರ, 19 ಏಪ್ರಿಲ್ 2017 (12:29 IST)
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿಯರ್ ಲಾರಿಯಿಂದ ಕೆಳಗೆಬಿದ್ದ ಬಿಯರ್ ಬಾಟಲ್`ಗಳನ್ನ ಆಯ್ದುಕೊಳ್ಳಲು ಜನ ಮುಗಿಬಿದ್ದ ಘಟನೆ ತುಮಕೂರಿನ ಕ್ಯಾತ್ಸಂದ್ರ ಬಳಿ ಹೀರೇಹಳ್ಳಿ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುತ್ತಿದ್ದ ಕಾರು ಮತ್ತು ಬಿಯರ್ ಲಾರಿ ನಡುವೆ ಅವಘಡ ಸಂಭವಿಸಿತ್ತು. ಈ ಸಂದರ್ಭ ಲಾರಿಯಲ್ಲಿದ್ದ ಬಿಯರ್ ಕೇಸ್`ಗಳು ಕೆಳಗೆ ಬಿದ್ದಿದ್ದವು. ಈ ಸಂದರ್ಭ ಮುಗಿಬಿದ್ದ ಜನ ಒಡೆಯದ ಬಾಟಲುಗಳನ್ನ ಆಯ್ದುಕೊಂಡು ಹೋದರು. ಇನ್ನೂ ಕೆಲವರು ಸ್ಥಳದಲ್ಲೇ ಬಿಯರ್ ಬಾಟಲ್ ಓಪನ್ ಮಾಡಿ ಬಿಯರ್ ಕುಡಿದರು.

ಕಾರಿನಲ್ಲಿ ಬರುತ್ತಿದ್ದರು ಕೇಸ್`ಗಟ್ಟಲೆ ಬಿಯರ್ ಕೊಡೊಯ್ದಿದ್ದಾರೆ. ಇನ್ನೂ, ಇತರೆ ಲಾರಿ ಮತ್ತು ಬಸ್ ಚಾಲಕರು ಬಿಯರ್ ಬಾಟಲಿಗಾಗಿ ಜಗಳವೇ ನಡೆಸಿದ್ದಾರೆ. ಈ ಸಂದರ್ಭ ಹಲವು ಸಮಯದವರೆಗೆ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕ್ಯಾತ್ಸಂದ್ರ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಮತ್ತಿತರರ ವಿರುದ್ಧಧ ಒಳ ಸಂಚು ಆರೋಪದ ಮರು ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ