Select Your Language

Notifications

webdunia
webdunia
webdunia
webdunia

ಕಚೇರಿ ಮೇಲಿಂದ ಜಿಗಿದು ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ

ಕಚೇರಿ ಮೇಲಿಂದ ಜಿಗಿದು ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2016 (08:49 IST)
ತಾವು ಕೆಲಸ ಮಾಡುತ್ತಿದ್ದ ಕಟ್ಟಡದಿಂದ ಜಿಗಿದು ಬ್ಯಾಂಕ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವಸಂತ್ ವಿಹಾರ್ (35) ಕೇಂಪೇಗೌಡ ವೃತ್ತದಲ್ಲಿನ ಸೆಂಟ್ರಲ್ ಬ್ಯಾಂಕ್‌ನಲ್ಲಿ  ಪ್ರಾದೇಶಿಕ ಅಧಿಕಾರಿಯಾಗಿದ್ದರು. 
 
ಸೀಮಾಂಧ್ರದ ಕಡಪು ಮೂಲದವರಾಗಿದ್ದ ವಸಂತ್ ಹೆಬ್ಬಾಳದಲ್ಲಿ ವಾಸವಾಗಿದ್ದರು. ಸೋಮವಾರ ಮುಂಜಾನೆ ನಿಗದಿತ ಸಮಯಕ್ಕಿಂತ  ಮುಂಚಿತವಾಗಿ ಬ್ಯಾಂಕಿಗೆ ಬಂದಿದ್ದ ಅವರು ಭದ್ರತಾ ಸಿಬ್ಬಂದಿ ಬಳಿ ಕೀ ಪಡೆದುಕೊಂಡು ನೇರವಾಗಿ ಐದನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಕ್ಕೆ ಜಿಗಿದಿದ್ದಾರೆ.
 
ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಅಸುನೀಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. 
 
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅಖಿಲೇಶ್ ಯಾದವ್‌ರನ್ನು ಬೆಂಬಲಿಸಿದ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ