Select Your Language

Notifications

webdunia
webdunia
webdunia
webdunia

ಅಯೋಧ್ಯೆ ಶ್ರೀರಾಮ ದೇವರಿಗೆ ಮಾತ್ರ ಮೀಸಲು: ಸಚಿವೆ ಉಮಾಭಾರತಿ

ಅಯೋಧ್ಯೆ ಶ್ರೀರಾಮ ದೇವರಿಗೆ ಮಾತ್ರ ಮೀಸಲು: ಸಚಿವೆ ಉಮಾಭಾರತಿ
ನವದೆಹಲಿ , ಸೋಮವಾರ, 17 ಅಕ್ಟೋಬರ್ 2016 (18:18 IST)
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚದುರಂಗದಾಟ ಆರಂಭವಾಗಿದೆ. ಇದೀಗ ಕೇಂದ್ರ ಸಚಿವೆ ಉಮಾ ಭಾರತಿ ಅಯೋಧ್ಯೆ ಶ್ರೀರಾಮ ದೇವರಿಗೆ ಮಾತ್ರ ಸೇರಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿಕೆ ನೀಡಿ ಮುಸ್ಲಿಂ ಸಮುದಾಯದ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
 
ಉತ್ತರಪ್ರದೇಶದಲ್ಲಿರುವ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಒಂದು ಕಡೆ ಪಕ್ಷದಲ್ಲಿನ ಭಿನ್ನಮತ, ಮತ್ತೊಂದೆಡೆ ಬಿಜೆಪಿ, ಮಗದೊಂದೆಡೆ ಬಿಎಸ್‌ಪಿ ಪಕ್ಷವನ್ನು ಎದುರಿಸಬೇಕಾಗಿ ಬಂದಿದೆ. 
 
ಇಂದು ಬೆಳಿಗ್ಗೆ ಕೇಂದ್ರ ಸಂಸ್ಕ್ರತಿ ಖಾತೆ ಸಚಿವ ಮಹೇಶ್ ಶರ್ಮಾ ನಾಳೆ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಘೋಷಿಸಿದ ನಂತರ ಸಚಿವೆ ಉಮಾ ಭಾರತಿ ಹೇಳಿಕೆ ಹೊರಬಿದ್ದಿದೆ.  
 
ಸಚಿವ ಶರ್ಮಾ, ಕೇಂದ್ರ ಸರಕಾರ ಉದ್ದೇಶಿತ ರಾಮಾಯಣ ಮ್ಯೂಸಿಯಂ ಕಟ್ಟಡ ನಿರ್ಮಾಣದ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ವಿವಾದಿತ ರಾಮಜನ್ಮಭೂಮಿ- ಬಾಬ್ರಿ ಮಸೀದಿಯಿಂದ ಸುಮಾರು 15 ಕಿ.ಮೀ ದೂರದಲ್ಲಿ ಕೇಂದ್ರ ಸರಕಾರ ಈಗಾಗಲೇ 25 ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆನ್ನುವುದು ತಪ್ಪು: ಚೀನಾ, ಭಾರತಕ್ಕೆ ತಿರುಗೇಟು