Publish Date: Mon, 28 Mar 2022 (07:41 IST)
Updated Date: Mon, 28 Mar 2022 (08:32 IST)
ಗುವಾಹಟಿ : ಸಮಾಜವನ್ನು ವಿರೋಧಿಸುವ ಹಾಗೂ ಹಿಂದುತ್ವದ ವಿರೋಧಿಯಾಗಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ನೀವು ತೆರಿಗೆಯನ್ನು ಮುಕ್ತಗೊಳಿಸುತ್ತೀರೋ ಇಲ್ಲವೋ ಅದು ನಿಮಗೆ ಬಿಟ್ಟಿರುವ ವಿಚಾರವಾಗಿದೆ.
ಆದರೆ ನಮ್ಮನ್ನು ಅವಮಾನಿಸುವ ಹಕ್ಕು ನಿಮಗೆ ಇಲ್ಲ. ನೀವು ಏನಾದರೂ ಮಾಡಿ, ಆದರೆ ಬಹಿರಂಗವಾಗಿ ಹಿಂದೂ ವಿರೋಧಿ ಆಗಬೇಡಿ ಎಂದು ವಾಗ್ದಾಳಿ ನಡೆಸಿದರು.
ಇಂದು ನಮ್ಮ ಹಿಂದೂ ಸಮಾಜ ಈ ಸ್ಥಿತಿಯಲ್ಲಿದ್ದರೆ, ಅದಕ್ಕೆ ಕಾರಣ ಹಿಂದೂ ಕುಟುಂಬದೊಳಗೆ ಹೆಚ್ಚು ಹಿಂದೂ ವಿರೋಧಿಗಳಿರುವುದಾಗಿದೆ. ಇಲ್ಲದಿದ್ದರೆ, ಹಿಂದೂ ನಾಗರಿಕತೆಯು ಜಗತ್ತಿಗೆ ದಾರಿ ತೋರಿಸುತ್ತಿತ್ತು ಎಂದು ಅಭಿಪ್ರಾಯಪಟ್ಟರು.