Select Your Language

Notifications

webdunia
webdunia
webdunia
webdunia

ಅಮಿತ್ ಶಾಗೆ ಬೈದರೆ ಹೆಂಡತಿಗೆ ಕೋಪ ಬರುತ್ತದೆ: ಅಮರ್ ಸಿಂಗ್

ಅಮಿತ್ ಶಾಗೆ ಬೈದರೆ ಹೆಂಡತಿಗೆ ಕೋಪ ಬರುತ್ತದೆ: ಅಮರ್ ಸಿಂಗ್
ಲಕ್ನೋ , ಗುರುವಾರ, 22 ಸೆಪ್ಟಂಬರ್ 2016 (13:33 IST)
ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ತಮ್ಮನ್ನು ನಾರದ ಮುನಿಗೆ ಹೋಲಿಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಹೇಳಿದ್ದಾರೆ.
 
ನಾರದ ಮುನಿ ಬ್ರಹ್ಮದೇವರ ಪುತ್ರ ಮತ್ತು ವಿಷ್ಣುವಿನ ಪರಮ ಭಕ್ತ.
 
ಅಮಿತ್ ಶಾ ಬಗ್ಗೆ ನಾನು ಟೀಕೆ ಮಾಡಲು ಬಯಸುವುದಿಲ್ಲ. ಯಾಕೆಂದರೆ ನನ್ನ ಪತ್ನಿ ಕೂಡಾ ಗುಜರಾತಿನವಳಾಗಿದ್ದರಿಂದ ಆಕೆಗೆ ಕೋಪ ಬರುತ್ತದೆ. ಆಕೆಗೆ ಕೋಪ ಬಂದರೆ ನಮಗೆ ಮನೆಯಲ್ಲಿ ಊಟ ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. 
 
ಕೆಲವು ಬಾರಿ ಚಿಕ್ಕಪ್ಪ ಶಿವಪಾಲ್ ಯಾದವ್ ಅಖಿಲೇಶ್ ಯಾದವ್ ಬೆಂಬಲಿಗರನ್ನು ಉಚ್ಚಾಟಿಸುತ್ತಾರೆ. ಕೆಲವು ಬಾರಿ ಅಖಿಲೇಶ್ ಚಿಕ್ಕಪ್ಪನ ಬೆಂಬಲಿಗರನ್ನು ಉಚ್ಚಾಟಿಸುತ್ತಾರೆ. ಇದರಲ್ಲಿ ಅಮರ್ ಸಿಂಗ್ ನಾರದ ಮುನಿಯ ಪಾತ್ರವಹಿಸುತ್ತಿದ್ದಾರೆ ಎನ್ನುವ ಅಮಿತ್ ಶಾ ಹೇಳಿಕೆಗೆ ಅಮರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
 
 ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಅಮರ್‌ಸಿಂಗ್‌ರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ.
 
ಆಸಕ್ತಿಕರ ವಿಷಯವೆಂದರೆ, ಮುಲಾಯಂ ಮತ್ತು ಅವರ ಸಹೋದರ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಸಿಂಗ್ ಅವರ ವೈಮನಸ್ಸಿಗೆ ಅಮರ್ ಸಿಂಗ್ ಮೂಲಕಾರಣ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ ಆಫರ್‌ಗೆ ಕೌಂಟರ್: ಬಿಎಸ್‌ಎನ್‌ಎಲ್‌ನಿಂದ 2ಜಿ, 3ಜಿ ಗ್ರಾಹಕರಿಗೆ ಉಚಿತ ವೈಸ್ ಕಾಲ್ ಸೇವೆ