Select Your Language

Notifications

webdunia
webdunia
webdunia
webdunia

ಅಖಿಲೇಶ್ ಮುಂದಿನ ಸಿಎಂ: ಮುಲಾಯಂ

ಅಖಿಲೇಶ್ ಮುಂದಿನ ಸಿಎಂ: ಮುಲಾಯಂ
ಲಖನೌ , ಮಂಗಳವಾರ, 10 ಜನವರಿ 2017 (08:26 IST)
ತಮ್ಮ ಪುತ್ರ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
 
ಸಹೋದರ ಶಿವಪಾಲ್ ಸಿಂಗ್ ಮತ್ತು ಆಪ್ತ ಅಮರ್ ಸಿಂಗ್ ಜತೆ ನಿನ್ನೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮ ಪಕ್ಷದಲ್ಲಿ ಒಗ್ಗಟ್ಟಿದ್ದು, ಸದ್ಯದಲ್ಲಿ ಜೊತೆಯಾಗಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
 
ಮುಂದುವರೆಸಿದ ಅವರು ನನ್ನ ಮತ್ತು ಅಖಿಲೇಶ್ ನಡುವೆ ಯಾವುದೇ ವಿವಾದವಿಲ್ಲ. ಪಕ್ಷದ ಬೆಳವಣಿಗೆಗೆ ಅಖಿಲೇಶ್ ಶ್ರಮ ಮಹತ್ವವಾದದ್ದು ಅತಿ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮೊಳಗಿದ್ದ ಪ್ರಶ್ನೆ ಈಗ ಮುಗಿದಿದೆ ಎಂದಿದ್ದಾರೆ. 
 
ಸೋದರ ಸಂಬಂಧಿ ರಾಮಗೋಪಾಲ್ ಅವರ ಹೆಸರೆತ್ತದೆ ಕಿಡಿಕಾರಿದ ಅವರು, ಕೇವಲ ಒಬ್ಬ ವ್ಯಕ್ತಿಯಿಂದಾಗಿ ಅಖಿಲೇಶ್ ದಾರಿ ತಪ್ಪುತ್ತಿದ್ದಾರೆ. ನಮ್ಮಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ  ಎಂದು ಹೇಳುವುದರ ಮೂಲಕ ಪಕ್ಷದಲ್ಲಿನ ಭಿನ್ನಮತಗಳು ಮುಂದುವರೆದಿವೆ ಎಂಬುದನ್ನು ಸಹ ಒಪ್ಪಿಕೊಂಡಿದ್ದರು.  

Share this Story:

Follow Webdunia kannada

ಮುಂದಿನ ಸುದ್ದಿ

ಜಯಾ ಸಾವಿನ ವರದಿ ಕೇಳಿದ ಮದ್ರಾಸ್ ಹೈಕೋರ್ಟ್