Webdunia - Bharat's app for daily news and videos

Install App

Air India plane crash: ವಿಮಾನ ಪತನಕ್ಕೆ ಇದೇ ಕಾರಣನಾ

Krishnaveni K
ಶುಕ್ರವಾರ, 13 ಜೂನ್ 2025 (10:51 IST)
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣವೇನೆಂಬುದರ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಈ ಐದು ಕಾರಣಗಳಿಗೆ ವಿಮಾನ ಪತನಗೊಂಡಿರಬಹುದಾ ಎಂದು ಅಂದಾಜಿಸಲಾಗುತ್ತಿದೆ.

ಕಾರಣ1
ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಪಕ್ಷಿ ಢಿಕ್ಕಿಯಾಗಿರುವ ಸಾಧ್ಯತೆಯಿದೆ. ಇದರಿಂದ ಟೇಕ್ ಆಫ್ ಪ್ರಕ್ರಿಯೆಗೆ ಸಮಸ್ಯೆಯಾಗಿರಬಹುದು. ಹಕ್ಕಿ ಪಡೆದು ವಿಮಾನದ ರೆಕ್ಕೆಗಳು, ಇಂಜಿನ್ ಗೆ ಹಾನಿಯಾಗಿರುವ ಸಾಧ್ಯತೆಯಿದೆ.

ಕಾರಣ2
ವಿಮಾನವನ್ನು ಕೇವಲ 825 ಅಡಿ ಮಾತ್ರ ಮೇಲೇರಿಸಲು ಸಾಧ್ಯವಾಗಿದೆ. ಅದಾದ ಬಳಿಕ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಮೇಲೇರಿಸಲು ಸಾಧ್ಯವಾಗಿಲ್ಲ.

ಕಾರಣ 3
ವಿಮಾನವನ್ನು ಮೇಲೇರಿಸಲು ಪೈಲೆಟ್ ಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು, ವಿಮಾನದಲ್ಲಿದ್ದ ಇಂಧನ ಖಾಲಿ ಮಾಡುವಷ್ಟೂ ಸಮಯ ಸಿಗಲಿಲ್ಲ.

ಕಾರಣ4
ವಿಮಾನದ ಲ್ಯಾಂಡಿಂಗ್ ಗೇರ್ ಗಳು ತೆರೆದ ಸ್ಥಿತಿಯಲ್ಲೇ ಇತ್ತು. ಹೀಗಾಗಿ ಇದರಲ್ಲಿ ಸಮಸ್ಯೆಯಾಗಿ ವಿಮಾನ ಹಾರಾಟಕ್ಕೆ ಅಗತ್ಯವಾದ ಎತ್ತರ ಪಡೆಯಲು ಸಾಧ್ಯವಾಗದೇ ಇರಬಹುದು. ಲ್ಯಾಂಡಿಂಗ್ ಗೇರ್ ತೆರೆದ ಸ್ಥಿತಿಯಲ್ಲಿತ್ತು. ಹೀಗಿದ್ದಾಗ ಗಾಳಿಯ ಪ್ರತಿರೋಧ ಹೆಚ್ಚಾಗುತ್ತದೆ.

ಕಾರಣ5
ವಿಮಾನದಲ್ಲಿ 1,25 ಲಕ್ಷ ಲೀಟರ್ ಇಂಧನವಿತ್ತು. ಜೊತೆಗೆ 242 ಪ್ರಯಾಣಿಕರೂ ಇದ್ದರು. ಹೀಗಾಗಿ ಅತಿಯಾದ ಇಂಧನ ಮತ್ತು ಜನರ ಭಾರದಿಂದ ಅಪಘಾತ ಸಂಭವಿಸಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments