Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಇನ್ಮುಂದೆ ಚಿನ್ನಮ್ಮನ ದರ್ಬಾರ್?

ತಮಿಳುನಾಡಿನಲ್ಲಿ ಇನ್ಮುಂದೆ ಚಿನ್ನಮ್ಮನ ದರ್ಬಾರ್?
ಚೆನ್ನೈ , ಶುಕ್ರವಾರ, 30 ಡಿಸೆಂಬರ್ 2016 (10:19 IST)
ತಮ್ಮ ಪ್ರೀತಿಯ ಅಮ್ಮ ಜಯಲಲಿತಾ ಅವರನ್ನು ಕಳೆದುಕೊಂಡಿರುವ ತಮಿಳುನಾಡಿನ ಜನರಿಗೆ ಚಿನ್ನಮ್ಮನೇ ಅಮ್ಮನಾಗ ಹೊರಟಿದ್ದಾರೆ. ಹೌದು ಜಯಾ ಆಪ್ತ ಸಖಿ ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯಾಗಿಸುವ ಸಿದ್ಧತೆ ಪ್ರಾರಂಭವಾಗಿದೆ.
ಜಯಲಲಿತಾ ನಿಧನದ ಬಳಿಕ ಅವರ ಪರಮಾಪ್ತ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಮತ್ತೀಗ ಅವರ ಜಾಗಕ್ಕೆ ಶಶಿಕಲಾ ಅವರನ್ನು ಕುಳ್ಳಿರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
 
ಇಂದು ಸಂಜೆ ಎಐಡಿಎಂಕೆ ಮುಖ್ಯ ಕಚೇರಿಯಲ್ಲಿ ಶಾಸಕರ ಮಹತ್ವದ ಸಭೆ ನಡೆಯಲಿದ್ದು ಕಡ್ಡಾಯವಾಗಿ ಹಾಜರಿರಬೇಕೆಂದು ಎಲ್ಲ ಶಾಸಕರಿಗೂ ಸೂಚನೆ ನಡೆಸಲಾಗಿದೆ.ಈ ಸಭೆಯಲ್ಲಿ  ಶಶಿಕಲಾ ಅವರನ್ನು ಪಕ್ಷದ ನಾಯಕಿ ಮತ್ತು ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ.
 
ಕಳೆದೆರಡು ದಿನಗಳ ಹಿಂದೆ ಜಯಲಲಿತಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಘೋಷಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟವಲ್‌ನಿಂದ ಬಿಗಿದು ನಿವೃತ್ತ ತಹಶೀಲ್ದಾರ್ ಬರ್ಬರ ಹತ್ಯೆ!