Select Your Language

Notifications

webdunia
webdunia
webdunia
webdunia

ಶಶಿಕಲಾಗೆ ಟೋಪಿ, ಪನ್ನೀರ್ ಸೆಲ್ವಂಗೆ ವಿದ್ಯುತ್ ಕಂಬ: ಶಾಕ್ ಕೊಟ್ಟ ಚುನಾವಣಾ ಆಯೋಗ

ಶಶಿಕಲಾಗೆ ಟೋಪಿ, ಪನ್ನೀರ್ ಸೆಲ್ವಂಗೆ ವಿದ್ಯುತ್ ಕಂಬ: ಶಾಕ್ ಕೊಟ್ಟ ಚುನಾವಣಾ ಆಯೋಗ
ಚೆನ್ನೈ , ಗುರುವಾರ, 23 ಮಾರ್ಚ್ 2017 (14:24 IST)
ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ. ನಗರ ಕ್ಷೇತ್ರ ಉಪಚುನಾವಣೆಯಲ್ಲಿ ಅಣ್ಣಾಡಿಎಂಕೆ ಎರಡು ಎಲೆ ಚಿಹ್ನೆಗಾಗಿ ಜಿದ್ದಾಜಿದ್ದಿಗೆ ಬಿದ್ದಿದ್ದ ಶಶಿಕಲಾಚ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ಚುನಾವಣಾ ಅಯೋಗ ಶಾಕ್ ನೀಡಿದೆ.

ಅಣ್ಣಾಡಿಎಂಕೆಯ ಚಿಹ್ನೆಯನ್ನ ಯಾರಿಗೂ ನೀಡದೆ ಸ್ಥಗಿತಗೊಳಿಸಿರುವ ಆಯೋಗ, ಶಶಿಕಲಾ ಬಣಕ್ಕೆ ಟೋಪಿ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬ ನೀಡಿದೆ. ಇದೇವೇಳೆ, ಇಬ್ಬರಿಗೂ ಬೇರೆ ಬೇರೆ ಹೆಸರುಗಳನ್ನೂ ಸೂಚಿಸಲಾಗಿದೆ. ಪನ್ನೀರ್ ಬಣಕ್ಕೆ ಎಐಎಡಿಎಂಕೆ ಪುರುಚ್ಚಿ ತಲೈವಿ ಅಮ್ಮ ಮತ್ತು ಶಶಿಕಲಾ ಬಣಕ್ಕೆ ಎಐಎಡಿಎಂಕೆ ಅಮ್ಮ ಎಂಬ ಹೆಸರುಗಳನ್ನೂ ಸೂಚಿಸಿದೆ.

ಏಪ್ರಿಲ್ 12ರಂದು ಚುನಾವಣೆ ನಡೆಯಲಿದ್ದು, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಮತ್ತು ಓ ಪನ್ನೀರ್ ಸೆಲ್ವಂ ಕ್ಯಾಂಪ್`ನಿಂದ ಇ. ಮಧುಸೂದನ್ ಸ್ಪರ್ಧಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗವಕಾಶ ಹೆಚ್ಚಿಸಿರುವುದು ಸರಕಾರದ ಸಾಧನೆಯಲ್ಲವೇ: ಸಿಎಂ ಸಿದ್ದರಾಮಯ್ಯ