Select Your Language

Notifications

webdunia
webdunia
webdunia
webdunia

ಇಂತಹ ಸಾವಿರ ಪನ್ನೀರ್‌ಸೆಲ್ವಂರನ್ನು ನೋಡಿದ್ದೇನೆ: ಶಶಿಕಲಾ ಗುಡುಗು

ಇಂತಹ ಸಾವಿರ ಪನ್ನೀರ್‌ಸೆಲ್ವಂರನ್ನು ನೋಡಿದ್ದೇನೆ: ಶಶಿಕಲಾ ಗುಡುಗು
ಚೆನ್ನೈ: , ಸೋಮವಾರ, 13 ಫೆಬ್ರವರಿ 2017 (15:09 IST)
ಮುಖ್ಯಮಂತ್ರಿ ಓ,ಪನ್ನೀರ್ ಸೆಲ್ವಂ ನಂಬಿಕೆ ದ್ರೋಹಿ, ವಿಶ್ವಾಸಘಾತಕ ವ್ಯಕ್ತಿ. ನನ್ನ ಜೀವನದಲ್ಲಿ ಇಂತಹ ಸಾವಿರ ಪನ್ನೀರ್‌ಸೆಲ್ವಂರನ್ನು ನೋಡಿದ್ದೇನೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಗುಡುಗಿದ್ದಾರೆ. 
 
ಪೋಯಿಸ್ ಗಾರ್ಡನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ಮನ(ಜಯಲಲಿತಾ) ಸಾವಿನ ನಂತರ ಇಂತಹ ನಾಟಕೀಯ ಘಟನೆಗಳು ನಡೆಯುತ್ತವೆ ಎನ್ನುವ ನಿರೀಕ್ಷೆಯಿತ್ತು. ಅದರಂತೆ ಪಕ್ಷವನ್ನು ವಿಭಜಿಸುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
 
ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಮೌನ ಮುಂದುವರಿಸಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಹುದ್ದೆಗೆ ಏರಲು ಬಯಸಿರುವ ಶಶಿಕಲಾ ಮತ್ತು ಪನ್ನೀರ್‌ಸೆಲ್ವಂ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ.
 
ಜಯಲಲಿತಾ ನಿಧನದ ನಂತರ ಮುಖ್ಯಮಂತ್ರಿಯಾಗುವಂತೆ ಪನ್ನೀರ್‌ಸೆಲ್ವಂಗೆ ನಾನೇ ಆಹ್ವಾನ ನೀಡಿದ್ದೆ. ಒಂದು ವೇಳೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಯಕೆಯಿದ್ದರೆ ನನ್ನೊಂದಿಗೆ ಚರ್ಚಿಸಬಹುದಿತ್ತು. ನನಗೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ. ಜಯಲಲಿತಾ ಸಾವು ನನಗೆ ತುಂಬಾ ನೋವು ತಂದಿದೆ ಎಂದು ತಿಳಿಸಿದ್ದಾರೆ.
 
ನಾನು ಮುಖ್ಯಮಂತ್ರಿಯಾಗುವ ಬಯಕೆ ಹೊಂದಿದ್ದೇನೆ ಎಂದು ಸೆಲ್ವಂ ಸುಳ್ಳು ಹೇಳಿದ್ದಾರೆ. ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ. ನನ್ನ ಪಾಲಿಗೆ ನನ್ನ ಅಕ್ಕ ಜಯಲಲಿತಾ ದೇವರ ಸಮಾನ. ಅಕ್ಕ ನಿಧನ ಹೊಂದಿದಾಗ ಪಕ್ಷವನ್ನು ವಿಭಜಿಸುವ ಕೃತ್ಯಗಳು ನಡೆಯುತ್ತಿವೆ ಎನ್ನುವುದು ಗಮನಕ್ಕೆ ಬಂದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಏತನ್ಮಧ್ಯೆ, ಮದ್ರಾಸ್ ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಪೊಲೀಸರು ರೆಸಾರ್ಟ್‌ನಲ್ಲಿ 119 ಶಾಸಕರಿದ್ದು ಒತ್ತೆಯಾಳಾಗಿ ಇರಿಸಲಾಗಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಕಾಂಗ್ರೆಸ್ ತಿರುಗುಬಾಣ: ಸಿಡಿ ಬಿಡುಗಡೆ ಮಾಡಿದ ಉಗ್ರಪ್ಪ