Select Your Language

Notifications

webdunia
webdunia
webdunia
webdunia

ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ

ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ
ಪಾಟ್ನಾ , ಶುಕ್ರವಾರ, 28 ಜುಲೈ 2017 (10:55 IST)
ಪಾಟ್ನಾ: ಆರ್ ಜೆಡಿಗೆ ಸಡ್ಡು ಹೊಡೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ಸಿಎಂ ನಿತೀಶ್ ಕುಮಾರ್ ಇಂದು ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ. ವಿಶೇಷವೆಂದರೆ ವಿಶ್ವಾಸಮತ ಯಾಚನೆಗೆ ಮೊದಲು ಬಿಹಾರ ರಾಜಕೀಯದಲ್ಲಿ ಹೈ ಡ್ರಾಮವೇ ನಡೆದಿದೆ.


ಒಂದೆಡೆ ನಿತೀಶ್ ನಡೆಗೆ ಮಿತ್ರ ಶರದ್ ಯಾದವ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ವಿರೋಧಿ ಕಾಂಗ್ರೆಸ್  ಪಕ್ಷದ ಬಹುತೇಕ ಶಾಸಕರು ನಿತೀಶ್ ಕುಮಾರ್ ಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಒಂದೆಡೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿತೀಶ್ ಆರ್ ಜೆಡಿ ಕೈಕೊಟ್ಟು ಬಿಜೆಪಿ ಸಖ್ಯ ಬೆಳೆಸಿರುವುದನ್ನು ಅಕ್ರಮ ಎಂದು ಜರೆಯುತ್ತಿದ್ದರೆ, ಅವರದೇ ಪಕ್ಷದ ಶಾಸಕರು ಬೆಂಬಲ ಸೂಚಿಸುತ್ತಿರುವುದು ಕಾಂಗ್ರೆಸ್ ಗೆ ಮುಜುಗರ ತರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!