Webdunia - Bharat's app for daily news and videos

Install App

ಹಿಮಾಚಲ ಪ್ರದೇಶ ಬಳಿಕ ಪಂಜಾಬ್ ಗೂ ಆರ್ಥಿಕ ಸಂಕಷ್ಟ: ಫ್ರೀ ಕೊಟ್ಟಿದ್ದರ ಫಲವೇ

Krishnaveni K
ಶುಕ್ರವಾರ, 6 ಸೆಪ್ಟಂಬರ್ 2024 (16:45 IST)
Photo Credit: Facebook
ನವದೆಹಲಿ: ಹಿಮಾಚಲಪ್ರದೇಶದ ಬಳಿಕ ಈಗ ಪಂಜಾಬ್ ನ ಆಪ್ ಸರ್ಕಾರವೂ ಕೈ ಕಾಲಿ ಮಾಡಿಕೊಂಡು ಕೂತಿದೆ. ಪಂಜಾಬ್ ನಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಸರ್ಕಾರ ಪೆಟ್ರೋಲ್-ಡೀಸೆಲ್ ದರರ ಏರಿಕೆ ಮಾಡಿದೆ. ಇದೆಲ್ಲಾ ಉಚಿತ ಕೊಡುಗೆಯ ಫಲ ಎನ್ನಲಾಗುತ್ತಿದೆ.

ಸಿಎಂ ಭಗವಂತ್ ಸಿಂಗ್ ಮಾನ್ ನೇತೃತ್ವದ ಆಪ್ ಸರ್ಕಾರ ಪಂಜಾಬ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್  ಹೆಚ್ಚಳ ಮಾಡಿದೆ. ಪರಿಣಾಮ ಇದು ಜನಸಾಮಾನ್ಯರಿಗೆ ದರ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್ ಪ್ರತೀ ಲೀಟರ್ ಗೆ 61 ಪೈಸೆ, ಡೀಸೆಲ್ ಪ್ರತೀ ಲೀಟರ್ ಗೆ 92 ಪೈಸೆ ಹೆಚ್ಚಳವಾಗಿದೆ.

ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶ ಆರ್ಥಿಕವಾಗಿ ದಿವಾಳಿಯಾಗಿರುವ ಕಾರಣ ಕೇಂದ್ರದ ಸಹಾಯ ಕೋರಿತ್ತು. ನೆರೆ ಪರಿಹಾರ ಕೊಡಲೂ ಹಣವಿಲ್ಲವೆಂದು ಕೇಂದ್ರಕ್ಕೆ ದುಂಬಾಲು ಬಿದ್ದಿತ್ತು. ಇದೀಗ ಇಂಡಿಯಾ ಒಕ್ಕೂಟದ ಮತ್ತೊಂದು ಪಕ್ಷ ಆಡಳಿತದಲ್ಲಿರುವ ಪಂಜಾಬ್ ನಲ್ಲೂ ಇದೇ ಗತಿಯಾಗಿದೆ.

ಸರ್ಕಾರಿ ನೌಕರರ ವೇತನವೂ ವಿಳಂಬವಾಗಿದೆ. ಇನ್ನು, ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯ ಸರ್ಕಾರ ಆರ್ಥಿಕತೆ ನಿಭಾಯಿಸಲು ವಿಫಲವಾಗಿದೆ. ಎಲ್ಲವೂ ಉಚಿತ ಕೊಡುಗೆಗಳ ಫಲ ಎಂದಿದೆ. ಕೇವಲ ಎರಡೇ ವರ್ಷಗಳಲ್ಲಿ ಆಪ್ ಸರ್ಕಾರ ದಿವಾಳಿಯಾಗಿದೆ ಎಂದು ಅಕಾಲಿ ದಳವೂ ಟೀಕೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments