Webdunia - Bharat's app for daily news and videos

Install App

ಕಾಫಿ ವಿತ್ ಪಿಎಂ ಮೋದಿ ನಂತರ ನೂತನ ಸಚಿವರ ಪ್ರಮಾಣ ವಚನ

Webdunia
ಭಾನುವಾರ, 3 ಸೆಪ್ಟಂಬರ್ 2017 (08:56 IST)
ನವದೆಹಲಿ:  ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಹುಶಃ ಇದು ಕೊನೆಯ ಸಚಿವ ಸಂಪುಟ ವಿಸ್ತರಣೆ. ಅದು ಇಂದು ನಡೆಯಲಿದ್ದು, 10.30 ಕ್ಕೆ 9 ಹೊಸ ಸಚಿವರು ಮೋದಿ ಸರ್ಕಾರಕ್ಕೆ ಸೇರ್ಪಡೆಯಾಗಲಿದ್ದಾರೆ.

 
ಇಂದು 10.30 ಕ್ಕೆ 9 ನೂತನ ಸಚಿವರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಕರ್ನಾಟಕದಿಂದ ಉತ್ತರ ಕರ್ನಾಟಕ ಸಂಸದ ಅನಂತ ಕುಮಾರ್ ಹೆಗ್ಡೆಗೆ ಸಚಿವ ಸ್ಥಾನ ಸಿಕ್ಕಿದೆ.

ಎಲ್ಲಾ ಸಚಿವರೂ ಬಿಜೆಪಿ ಸಂಸದರು ಎನ್ನುವುದು ವಿಶೇಷ. ಜೆಡಿಯು ಅಥವಾ ಎಐಎಡಿಎಂಕೆ ಸಂಸದರಿಗೂ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕೀತು ಎಂಬ ನಿರೀಕ್ಷೆ ಹುಸಿಯಾಗಿದೆ.  ಪ್ರಮಾಣ ವಚನ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ನೂತನ ಸಚಿವರು ಯಾರೆಲ್ಲಾ?: ಆರ್ ಕೆ ಸಿಂಗ್ (ಬಿಹಾರ), ಹರ್ದೀಪ್ ಸಿಂಗ್ ಪುರಿ (ಮಾಜಿ ರಾಯಭಾರಿ), ಶಿವ ಪ್ರತಾಪ್ ಶುಕ್ಲಾ (ಉತ್ತರ ಪ್ರದೇಶ), ಸತ್ಯಪಾಲ್ ಸಿಂಗ್ (ಭಾಗ್ ಪತ್), ಆಲ್ಫೋನ್ಸ್ ಕಣ್ಣಾಂತಮನಮ್ (ಮಾಜಿ ಅಧಿಕಾರಿ), ಅಶ್ವಿನಿ ಕುಮಾರ್ ಚೌಬೆ (ಬಿಹಾರ), ಅನಂತ ಕುಮಾರ ಹೆಗ್ಡೆ (ಉತ್ತರ ಕನ್ನಡ), ಗಜೇಂದ್ರ ಸಿಂಗ್ ಶೆಖಾವತ್ (ಜೋಧ್ ಪುರ್), ಮತ್ತು ವೀರೇಂದ್ರ ಕುಮಾರ್ (ಮಧ್ಯ ಪ್ರದೇಶ).

ಇದನ್ನೂ ಓದಿ.. ಲಂಕಾದ ಭವಿಷ್ಯ ಟೀಂ ಇಂಡಿಯಾ ಕೈಯಲ್ಲಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments