ನಟಿ ಪ್ರಿಯಾಮಣಿ, ಪೇಟಾದಿಂದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ

Sampriya
ಸೋಮವಾರ, 18 ಮಾರ್ಚ್ 2024 (18:52 IST)
Photo Courtesy Facebook
ಕೊಚ್ಚಿ:  ಕೇರಳದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಬಹುಭಾಷಾ ನಟಿ ಪ್ರಿಯಾಮಣಿ ಅವರು ಪೇಟಾ ಸಂಸ್ಥೆಯ ಜೊತೆಗೂಡಿ ಇಂದು ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ ಆನೆಯನ್ನು ದಾನ ನೀಡಿದರು. 
 
ಕಳೆದ ವರ್ಷ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ಯಾಂತ್ರಿಕ​ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತ್ತು. ಅದರಂತೆ ಮೊದಲ ಯಾಂತ್ರಿಕ ಆನೆ ತ್ರಿಶೂರ್ ದೇಗುಲದಲ್ಲಿ ಕಾಣಿಸಿಕೊಂಡಿತ್ತು. ಈ ಯಾಂತ್ರಿಕ ಆನೆಯ ಬೆಲೆ ₹5 ಲಕ್ಷ ಎಂದು ಹೇಳಲಾಗಿದೆ.
 
ನಟಿ ಪಪ್ರಿಯಾಮಣಿ ಅವರು ದಾನ ನೀಡಿರುವ ಯಾಂತ್ರಿಕ ಆನೆಗೆ ‘ಮಹಾದೇವನ್’​ ಎಂದು ನಾಮಕರಣ ಮಾಡಲಾಗಿದೆ.  
 
ಈ ಸಂಬಂಧ  ಪ್ರತಿಕ್ರಿಯಿಸಿದ ನಟಿ ಪ್ರಿಯಾಮಣಿ, 'ಪೇಟಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ನೀಡಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು' ಎಂದು ಖುಷಿ ವ್ಯಕ್ತ ಪಡಿಸಿದರು. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲ ಜಮ್ಮು ಕಾಶ್ಮೀರಿ ಪ್ರಜೆಗಳು ಭಯೋತ್ಪಾದಕರಲ್ಲ: ಸಿಎಂ ಓಮರ್ ಅಬ್ದುಲ್ಲಾ

ಸುರಂಗ ರಸ್ತೆ ಭಂಡತನದ ನಿರ್ಧಾರ: ಪಿ.ಸಿ.ಮೋಹನ್

‌‌ಸುಧಾಮೂರ್ತಿ ಡ್ಯಾನ್ಸ್‌ ಸ್ಟೆಪ್ಸ್‌ಗೆ ಡೋಲು ಬಾರಿಸುವವರೇ ಶಾಕ್‌, Viral Video

ಮೇಕೆದಾಟು ಯೋಜನೆ, ಇದು ಬೆಂಗಳೂರಿಗರ ಗೆಲುವು: ಡಿಸಿಎಂ ಡಿಕೆ ಶಿವಕುಮಾರ್

ಅಬ್ಬಬ್ಬಾ ಖತರ್ನಾಕ್ ಡಾ ಶಾಹೀನ್ ಕತೆ ಒಂದಾ ಎರಡಾ

ಮುಂದಿನ ಸುದ್ದಿ
Show comments