Select Your Language

Notifications

webdunia
webdunia
webdunia
webdunia

ಜಯಲಲಿತಾ ಸಾವು ಕೊಲೆಯೇ?: ತನಿಖೆ ನಡೆಸಲು ನಟಿ ಗೌತಮಿ ಪ್ರಧಾನಿಗೆ ಪತ್ರ

ಜಯಲಲಿತಾ ಸಾವು ಕೊಲೆಯೇ?: ತನಿಖೆ ನಡೆಸಲು ನಟಿ ಗೌತಮಿ ಪ್ರಧಾನಿಗೆ ಪತ್ರ
Chennai , ಶುಕ್ರವಾರ, 9 ಡಿಸೆಂಬರ್ 2016 (10:29 IST)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಈ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ವಿವಿಧ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸುತ್ತಿವೆ. ಈ ಹಿನ್ನಲೆಯಲ್ಲಿ ಜಯಲಲಿತಾ ಸಾವು ಸಹಜವೇ ಎಂದು ತಿಳಿಯಲು ತನಿಖೆ ನಡೆಸಿ ಎಂದು ನಟಿ ಗೌತಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಜಯಲಲಿತಾ ಅಧಿಕಾರ ದಾಹಿಗಳ ಸಂಚಿಗೆ ಬಲಿಯಾದರು. ಅವರು ತೀರಿಕೊಂಡು ಎರಡು ದಿನಗಳ ನಂತರ ಅವರ ಸಾವಿನ ಸುದ್ದಿಯನ್ನು ಬಹಿರಂಗಪಡಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿದ್ದಷ್ಟು ಕಾಲವೂ ಯಾರಿಗೂ ಯಾಕೆ ಅವರನ್ನು ತೋರಿಸಿರಲಿಲ್ಲ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಘೋಷಣೆಯನ್ನು ರಾತ್ರೋ ರಾತ್ರಿ ಮಾಡಿದ್ದೇಕೆ. ಜಯಲಲಿತಾ ಸಾವಿನ ಕುರಿತಾದ ವಿಷಯಗಳು ಅನುಮಾನ ಹುಟ್ಟಿಸುತ್ತಿರುವ ಹಿನ್ನಲೆಯಲ್ಲಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಗೌತಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೂ. 45 ಸಾವಿರ ಕೋಟಿ ಸಾಲ ರೈತರ ತಲೆಯ ಮೇಲಿದೆ