Select Your Language

Notifications

webdunia
webdunia
webdunia
webdunia

ಕೆಂಪು ಕೋಟೆಯಲ್ಲಿ ರೈತ ಗಲಭೆಗೆ ಪ್ರೇರೇಪಿಸಿದ್ದ ನಟ ದೀಪ್ ಸಿಧು ದುರ್ಮರಣ

ಕೆಂಪು ಕೋಟೆಯಲ್ಲಿ ರೈತ ಗಲಭೆಗೆ ಪ್ರೇರೇಪಿಸಿದ್ದ ನಟ ದೀಪ್ ಸಿಧು ದುರ್ಮರಣ
ನವದೆಹಲಿ , ಬುಧವಾರ, 16 ಫೆಬ್ರವರಿ 2022 (10:20 IST)
ನವದೆಹಲಿ: ರೈತ ಗಲಭೆ ವೇಳೆ ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪಂಜಾಬಿ ನಟ, ಕಾರ್ಯಕರ್ತ ದೀಪ್ ಸಿಧು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ದೀಪ್ ಸಿಧು ಕುಂಡ್ಲಿ-ಮನೇಸರ್ ಪಲ್ವಾಲ್ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ನಿನ್ನೆ ರಾತ್ರಿ 9.30 ರ ಸುಮಾರಿಗೆ ದೀಪ್ ಸಿಧು ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಸಿಧು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಚಲಿಸುತ್ತಿದ್ದ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆ ಸೂಚಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ವಿಚಾರಕ್ಕೆ ಜಗಳ: ಸ್ನೇಹಿತನ ಕೊಲೆ