Select Your Language

Notifications

webdunia
webdunia
webdunia
webdunia

ಕಿರಾತಕರ ಕೌರ್ಯ: ಗ್ಯಾಂಗ್‌ರೇಪ್ ಸಂತ್ರಸ್ಥೆ ಮೇಲೆ ಅ್ಯಸಿಡ್ ದಾಳಿ

ಕಿರಾತಕರ ಕೌರ್ಯ: ಗ್ಯಾಂಗ್‌ರೇಪ್ ಸಂತ್ರಸ್ಥೆ ಮೇಲೆ ಅ್ಯಸಿಡ್ ದಾಳಿ
ಲಕ್ನೋ , ಭಾನುವಾರ, 2 ಜುಲೈ 2017 (11:19 IST)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗ್ಯಾಂಗ್‌ರೇಪ್ ಸಂತ್ರಸ್ಥೆ ಭೇಟಿ ಮಾಡಿದ ಮಾರನೇ ದಿನವೇ ಆಕೆಯ ಮೇಲೆ ಕಿರಾತಕರು ಅ್ಯಸಿಡ್ ದಾಳಿ ನಡೆಸಿದ್ದಾರೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 
 
ಒಂಬತ್ತು ವರ್ಷಗಳ ಹಿಂದೆ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದ ಇದೇ ಕಾಮುಕರು, ಇಂದು ಮತ್ತೆ ದ್ವಿಚಕ್ರವಾಹನದಲ್ಲಿ ಬಂದು ಯುವತಿಯ ಮೇಲೆ ಅ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ.
 
ಸಿಎಂ ಯೋಗಿ ಆದಿತ್ಯನಾಥ್ ಯುವತಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 
 
ಆರೋಪಿಗಳ ಸುಳಿವು ದೊರೆತಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ-ನಿತೀಶ್ ದೋಸ್ತಿಯಲ್ಲಿ ಬಿರುಕು?!