Select Your Language

Notifications

webdunia
webdunia
webdunia
webdunia

ಕನ್ಹಯ್ಯಾ ಕುಮಾರ್ ಹಾರ ಹಾಕಿದ ಮೂರ್ತಿಯನ್ನು ಶುದ್ದೀಕರಣಗೊಳಿಸಿದ ಎಬಿವಿಪಿ, ಬಜರಂಗದಳ

ಕನ್ಹಯ್ಯಾ ಕುಮಾರ್ ಹಾರ ಹಾಕಿದ ಮೂರ್ತಿಯನ್ನು ಶುದ್ದೀಕರಣಗೊಳಿಸಿದ ಎಬಿವಿಪಿ, ಬಜರಂಗದಳ
ಪಾಟ್ನಾ , ಶನಿವಾರ, 2 ಜುಲೈ 2016 (19:35 IST)
ಖ್ಯಾತ ಕವಿ ದಿನಕರ್ ಮೂರ್ತಿಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಧ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹಾರ ಹಾಕಿದ ಹಿನ್ನೆಲೆಯಲ್ಲಿ, ಇಂದು ಎಬಿವಿಪಿ ಮತ್ತು ಬಜರಂಗದಳದ ಕಾರ್ಯಕರ್ತರು ಮೂರ್ತಿಯನ್ನು ಗಂಗಾಜಲದಿಂದ ಶುದ್ದೀಕರಣಗೊಳಿಸಿದ ಘಟನೆ ವರದಿಯಾಗಿದೆ.  
 
ಕನ್ಹಯ್ಯಾ ಕುಮಾರ್  ಖ್ಯಾತ ಕವಿ ದಿನಕರ ಮೂರ್ತಿಗೆ ಹಾರ ಹಾಕಿ ಶೃದ್ಧಾಂಜಲಿ ಅರ್ಪಿಸಿದ್ದರು. ದಿನಕರ ಮೂರ್ತಿಗೆ ಹಾಕ ಹಾಕುವ ಮೂಲಕ ಕನ್ಹಯ್ಯಾ ಕುಮಾರ್ ಈ ಸ್ಥಳವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಎಬಿವಿಪಿ ಮತ್ತು ಬಜರಂಗದಳ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. 
 
ದೀರ್ಘಾವಧಿಯ ನಂತರ ಬೇಗುಸರಾಯಿ ಗ್ರಾಮಕ್ಕೆ ಬಂದ ಕನ್ಹಯಾ ಕುಮಾರ್‌ಗೆ ಗ್ರಾಮಸ್ಥರಿಂದ, ಕುಟುಂಬದವರಿಂದ ನೆರೆಹೊರೆಯವರು ಇತರ ಗ್ರಾಮಗಳ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ ದೊರೆಯಿತು. 
 
ಕನ್ಹಯ್ಯಾ ಕುಮಾರ್ ಆಗಮನದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
 
ಕಳೆದ ಏಪ್ರಿಲ್ ತಿಂಗಳಲ್ಲಿ ಕನ್ಯ್ಯಾ ಕುಮಾರ್ ಪಾಟ್ನಾ ನಗರಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದರೂ ಸ್ವಂತ ಗ್ರಾಮಕ್ಕೆ ತೆರಳಿರಲಿಲ್ಲ ಎಂದು ಮೂಲಗಳು ತಿಳಿಸಿವೆ. 

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಅಪಘಾತಕ್ಕೆ ಮೂರು ಬಲಿ: ರಾಜಸ್ಥಾನ ಶಾಸಕನ ಪುತ್ರನ ಬಂಧನ