Select Your Language

Notifications

webdunia
webdunia
webdunia
webdunia

ಕಾರು ಅಪಘಾತಕ್ಕೆ ಮೂರು ಬಲಿ: ರಾಜಸ್ಥಾನ ಶಾಸಕನ ಪುತ್ರನ ಬಂಧನ

ಕಾರು ಅಪಘಾತಕ್ಕೆ ಮೂರು ಬಲಿ: ರಾಜಸ್ಥಾನ ಶಾಸಕನ ಪುತ್ರನ ಬಂಧನ
ಜೈಪುರ್ , ಶನಿವಾರ, 2 ಜುಲೈ 2016 (19:23 IST)
ಅಟೋರಿಕ್ಷಾ ಮತ್ತು ಪೊಲೀಸ್ ವಾಹನಕ್ಕೆ ಡಿಕ್ಕಿಹೊಂಡದು ಮೂವರ ಸಾವಿಗೆ ಕಾರಣನಾದ ಸ್ವತಂತ್ರ ಶಾಸಕ ನಂದಕಿಶೋರ್ ಮೆಹರಾ ಪುತ್ರ ಸಿದ್ಧಾರ್ಥ ಮೆಹರಾನನ್ನು ಪೊಲೀಸರು ಬಂಧಿಸಿದ್ದಾರೆ.
   
ಪೊಲೀಸ್ ಮೂಲಗಳ ಪ್ರಕಾರ, ಸಿದ್ಧಾರ್ಥ ಮೆಹರಾ ಅಪಘಾತವೆಸಗಿದ ಸಂದರ್ಭದಲ್ಲಿ ಮದ್ಯ ಸೇವಿಸಿದ್ದನು ಎನ್ನಲಾಗಿದೆ. ಅಪಘಾತದಲ್ಲಿ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ. ಅಟೋರಿಕ್ಷಾದಲ್ಲಿದ್ದ ಮೃತರಾದ ಮೂವರ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. 
 
ಆದರೆ, ಆರೋಪಗಳನ್ನು ತಳ್ಳಿಹಾಕಿದ ಸಿದ್ಧಾರ್ಥ ನಾನು ಕಾರು ಚಲಾಯಿಸುತ್ತಿರಲಿಲ್ಲ ಮತ್ತು ಮದ್ಯ ಸೇವಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
 
ಅಪಘಾತದ ಘಟನೆ ನಡೆಯುತ್ತಿದ್ದಂತೆ ಸಿದ್ಧಾರ್ಥ ಮೆಹರಿಯಾನನ್ನು ಪೊಲೀಸರು ಬಂಧಿಸಿ ಮದ್ಯ ಸೇವನೆ ಪರೀಕ್ಷೆಗಾಗಿ ರಕ್ತದ ಸ್ಯಾಂಪಲ್‌ಗಳನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನರೊಂದಿಗೆ ಸಂಪರ್ಕದಲ್ಲಿರಲು ಫೇಸ್‌ಬುಕ್ ಪೇಜ್ ಆರಂಭಿಸಿದ ಕೇರಳ ಸಿಎಂ