Select Your Language

Notifications

webdunia
webdunia
webdunia
webdunia

ಗೈರುಹಾಜರಿ: ಬಿಜೆಪಿ ಸಂಸದರಿಗೆ ಅಮಿತ್ ಶಾ ಎಚ್ಚರಿಕೆ

ಗೈರುಹಾಜರಿ: ಬಿಜೆಪಿ ಸಂಸದರಿಗೆ ಅಮಿತ್ ಶಾ ಎಚ್ಚರಿಕೆ
ನವದೆಹಲಿ , ಮಂಗಳವಾರ, 1 ಆಗಸ್ಟ್ 2017 (16:02 IST)
ಸಂಸತ್ತಿನ ಅಧಿವೇಶನದಲ್ಲಿ ಕಲಾಪಕ್ಕೆ ಗೈರುಹಾಜರಾಗುವ ಸಂಸದರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶವನ್ನು ಧಿಕ್ಕರಿಸಿ ಕಲಾಪಕ್ಕೆ ಗೈರುಹಾಜರಾಗುವ ಸಂಸದರ ವಿವರಗಳನ್ನು ಕೊಡುವಂತೆ ಸಂಸದೀಯ ವ್ಯವಹಾರಗಳ ಸಚಿವರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.
 
ಸಂಸತ್ ಕಲಾಪಕ್ಕೆ ಗೈರುಹಾಜರಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಸಂಸದರಿಗೆ ಶಾ ಎಚ್ಚರಿಕೆ ನೀಡಿದ್ದಾರೆ.
 
ಸಂಸತ್ ಅಧಿವೇಶನದಲ್ಲಿ ಪ್ರಮುಖ ಮಸೂದೆಗಳನ್ನು ಮಂಡಿಸುವ ಸಂದರ್ಭದಲ್ಲಿ ವಿಪ್ ನೀಡಿದರೂ ಸಂಸದರು ಗೈರು ಹಾಜರಾಗುತ್ತಿದ್ದಾರೆ. ಇಂತಹ ಅಶಿಸ್ತು ಬಿಜೆಪಿ ಪಕ್ಷ ಯಾವತ್ತೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಜತೆ ಜಗಳ: ಅಳಿಯನನ್ನೇ ಸಜೀವವಾಗಿ ದಹಿಸಿದ ಮಾವ