Select Your Language

Notifications

webdunia
webdunia
webdunia
webdunia

ಗುಜರಾತ್‌ನಲ್ಲಿ ಕಣಕ್ಕಿಳಿಯಲಿದ್ದೇವೆ: ಅರವಿಂದ ಕೇಜ್ರಿವಾಲ್

ಗುಜರಾತ್‌ನಲ್ಲಿ ಕಣಕ್ಕಿಳಿಯಲಿದ್ದೇವೆ: ಅರವಿಂದ ಕೇಜ್ರಿವಾಲ್
ಸೂರತ್ , ಸೋಮವಾರ, 17 ಅಕ್ಟೋಬರ್ 2016 (14:58 IST)
ಗೋವಾ, ಪಂಜಾಬ್‌ಗಳಂತೆ ನಾವು ಗುಜರಾತ್‌ನಲ್ಲಿ ಸಹ ಅದೃಷ್ಟ ಪರೀಕ್ಷಿಸಲಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 
ಸೂರತ್‌ನಲ್ಲಿ ಭಾರಿ ಪ್ರಚಾರ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಜ್ರಿವಾಲ್ ತಾವು ಗುಜರಾತ್ ವಿಧಾನಸಭೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. 
 
ಈ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಕಮಲ ನೇತೃತ್ವದ ಸರ್ಕಾರದ ಮೇಲೆ ಈಗಾಗಲೇ ಮುನಿಸಿಕೊಂಡಿರುವ ಪಟೇದಾರ್ ಸಮುದಾಯವನ್ನು ತಮ್ಮತ್ತ ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. 
 
ವಾಸ್ತವವಾಗಿ ಅಮಿತ್ ಶಾ ಅವರೇ ಗುಜರಾತ್ ಆಡಲಿತ ನಡೆಸುತ್ತಿದ್ದಾರೆ, ಅವರನ್ನು ಕಿತ್ತೊಗೆಯಿರಿ ಎಂದು ಅವರ ಮತದಾರರರಲ್ಲಿ ಮನವಿ ಮಾಡಿದ್ದಾರೆ. 
 
ಅಮಿತ್ ಶಾ ಅವರನ್ನು ರಾಷ್ಟ್ರದ್ರೋಹಿ ಎಂದ ಅವರು ಪಟೇದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರನ್ನು ದೇಶಭಕ್ತ ಎಂದು ಎಂದು ಹೊಗಳಿದರು. 
 
ಕಮಲ ಮತ್ತು ಕೈ ಗಂಡ- ಹೆಂಡತಿಯರಿದ್ದರಂತೆ ಎಂದ ಕೇಜ್ರಿವಾಲ್, ಚುನಾವಣೆಯ ಬಳಿಕ ವಿಧಾನಸಭೆಯಲ್ಲಿ ಕುಳಿತುಕೊಳ್ಳುವವರು  ಆಪ್ ಸದಸ್ಯರು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕಾರ್ಯಕ್ರಮಕ್ಕೆ 36 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿದ ಮೋದಿ ಸರಕಾರ