ಸಿಬಿಎಸ್ಇ ಮುಖ್ಯಸ್ಥರಾಗಿ ಮಾಜಿ ಮಾನವ ಸಂಪನ್ಮೂಲ ಖಾತೆ ಸಚಿವೆ ಶಿಫಾರಸ್ಸು ಮಾಡಿದ ಅಯ್ಕೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಪ್ರಧಾನಮಂತ್ರಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ, ಮಾನವ ಸಂಪನ್ಮೂಲ ಖಾತೆ ಸಚಿವಾಲಯ ಕಳುಹಿಸಿದ್ದ ಸಿಬಿಎಸ್ಇ ಮುಖ್ಯಸ್ಥರಾಗಿ ಡಾ.ಸರ್ವೇಂದ್ರ ವಿಕ್ರಂ ಬಹಾದ್ದೂರ್ ಸಿಂಗ್ ಅವರ ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಥಾನದಿಂದ ಸ್ಮೃತಿ ಇರಾನಿ ಎತ್ತಂಗಡಿ ಮಾಡಿದ ಕೇವಲ ಒಂದು ವಾರದ ನಂತರ, ಸಂಪುಟದ ನೇಮಕಾತಿ ಸಮಿತಿ ಹಿಂದೆ ಮಾಡಿರುವ ನೇಮಕಾತಿ ಶಿಫಾರಸ್ಸುಗಳನ್ನು ಪ್ರಸ್ತು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸೆಂಟಲ್ ಸ್ಟಾಫಿಂಗ್ ಯೋಜನೆಯಡಿ ನೇಮಕಾತಿ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಡಾ.ಸರ್ವೇಂದ್ರ ವಿಕ್ರಂ ಬಹಾದ್ದೂರ್ ಸಿಂಗ್ ಪ್ರಸ್ತುತ ಉತ್ತರಪ್ರದೇಶದ ಶಿಕ್ಷಣ ಸಚಿವಾಲಯದ ಸೇವೆಯಲ್ಲಿದ್ದು, ರಾಜ್ಯ ಸರಕಾರದ ಪ್ರಸ್ತುತ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.