Webdunia - Bharat's app for daily news and videos

Install App

ಒಂದೇ ಕುಟುಂಬದ 9 ಜನರ ಮೇಲೆ ಆ್ಯಸಿಡ್ ದಾಳಿ

Webdunia
ಮಂಗಳವಾರ, 27 ಡಿಸೆಂಬರ್ 2016 (10:19 IST)
ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಯಲ್ಲಿ ಒಂದೇ ಕುಟುಂಬದ 9 ಮಹಿಳೆಯರಿಗೆ ಆ್ಯಸಿಡ್ ಎರಚಿದ ಅಮಾನವೀಯ ಘಟನೆ ಪಂಜಾಬ್‌ನ ಕಪೂರ್ತಲಾದಲ್ಲಿ ನಡೆದಿದೆ. 
ಬೂಯಿ ಗ್ರಾಮದ ಅಕಾಲಿ ಸರಪಂಚ್ ವಿನೋದ್ ಸೆಹ್ಗಲ್ ಹಾಗೂ ಮತ್ತೊಂದು ಗ್ರಾಮದ ಗುಂಪಿನ ನಡುವೆ ಭೂಮಿಗೆ ಸಂಬಂಧಿಸಿದಂತೆ ಘರ್ಷಣೆ ನಡೆದಿತ್ತು. 
 
ಗಲಾಟೆ ತಾರಕಕ್ಕೇರಿ ವಿನೋದ್ ಪತ್ನಿ ಮತ್ತು 8 ಮಂದಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಅವರಲ್ಲಿ 7 ಜನರು ಕೂಲಿ ಕಾರ್ಮಿಕರಾಗಿದ್ದು ಮತ್ತಿಬ್ಬರು ವಿನೋದ್ ಪರಿವಾರದ ಸದಸ್ಯರಾಗಿದ್ದಾರೆ. 
 
ಪೀಡಿತರಲ್ಲಿ ಒಬ್ಬ ಅಪ್ರಾಪ್ತೆ ಕೂಡ ಇದ್ದಾಳೆ. ಘಟನೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು ಅವರೆಲ್ಲರನ್ನು ಜಲಂಧರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments