Webdunia - Bharat's app for daily news and videos

Install App

ರಾಘವೇಶ್ವರ್ ಸ್ವಾಮೀಜಿಗೆ ಬೆದರಿಕೆ: ಉಗ್ರಪ್ಪ ವಿರುದ್ಧ ಪ್ರತಿದೂರು!

Webdunia
ಮಂಗಳವಾರ, 27 ಡಿಸೆಂಬರ್ 2016 (10:02 IST)
ರಾಮಚಂದ್ರಾಪುರ ಮಠದ ರಾಘವೇಶ್ವರ್ ಸ್ವಾಮೀಜಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುತ್ತಿರುವುದಕ್ಕೆ ಹಾಗೂ ಸತ್ಯ ಶೋಧನಾ ಮಿತ್ರ ಮಂಡಳಿಯ ವರ್ತನೆಗೆ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಪ್ರಚೋದನಕಾರಿ ಮಾತುಗಳೇ ಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಠದ ಆಡಳಿತ ಮಂಡಳಿ ಪ್ರತಿದೂರು ನೀಡಿದೆ. 
 
ಸ್ವಾಮೀಜಿಯನ್ನು ಗುಂಡಕ್ಕಿ ಕೊಲ್ಲಬೇಕು ಎಂದು ಫೇಸ್‌ಬುಕ್ ಹಾಗೂ ವಾಟ್ಸಪ್‌ನಲ್ಲಿ ಸಂದೇಶ  ರವಾನಿಸುತ್ತಿದ್ದಾರೆ. ಸಮಾಜದಲ್ಲಿ ಕಲಹ ಉಂಟಾಗಲು ಕಾರಣರಾಗಿರುವ ಉಗ್ರಪ್ಪ ಹಾಗೂ ಬೆದರಿಕೆ ಸಂದೇಶ ರವಾನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಠದ ಆಡಳಿತ ಮಂಡಳಿ ಆಗ್ರಹಿಸಿದೆ.
 
ರಾಘವೇಶರ್ ಶ್ರೀಗಳ ವಿರುದ್ಧದ ಪ್ರಕರಣದ ಕುರಿತು ತ್ವರಿತ ತನಿಖೆಯನ್ನು ನಡೆಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಶ್ರೀಗಳ ಬೆಂಬಲಿಗರೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಮಹಿಳಾ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ದೂರು ಸಲ್ಲಿಸಿದರು.
 
ಶಾಸಕನಾದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯೆಂದರೆ ಜನಸಾಮಾನ್ಯರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದ ಉಗ್ರಪ್ಪ, ಪೊಲೀಸರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ

Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments