Select Your Language

Notifications

webdunia
webdunia
webdunia
webdunia

ಶಾಲಾ ಬಸ್ ಉರುಳಿ 7 ಮಕ್ಕಳ ಸಾವು

8 Dead
ಅಮೃತಸರ , ಬುಧವಾರ, 21 ಸೆಪ್ಟಂಬರ್ 2016 (08:52 IST)
ಶಾಲಾ ಬಸ್ಸೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ 8 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಅಮೃತಸರದಲ್ಲಿ ನಡೆದಿದೆ. ಘಟನೆಯಲ್ಲಿ 17 ಮಕ್ಕಳಿಗೆ ಗಾಯಗಳಾಗಿವೆ.

 
ಭಾರತ- ಪಾಕ್ ಗಡಿಯ ಅಟ್ಟಾರಿ ಸಮೀಪದ ಮಹಾವಾ ಬಳಿ ಈ ದುರಂತ ಸಂಭವಿಸಿದ್ದು ಮಕ್ಕಳು ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಜವರಾಯ ರುದ್ರ ನರ್ತನ ಮೆರೆದಿದ್ದಾನೆ. ಡಿಎವಿ ಪಬ್ಲಿಕ್ ಸ್ಕೂಲ್‌ಗೆ ಸೇರಿದ್ದ ಬಸ್‌ನಲ್ಲಿ ಒಟ್ಟು 37 ಮಕ್ಕಳಿದ್ದರು. 
 
ಹೆಚ್ಚಿನ ಮಕ್ಕಳು ಕಿಂಡರ್ ಗಾರ್ಡನ್ ವಿದ್ಯಾರ್ಥಿಗಳಾಗಿದ್ದು, ನಿನ್ನೆ ತಾನೇ ಕೆಲಸಕ್ಕೆ ಸೇರಿದ್ದ ಚಾಲಕ ಅತಿವೇಗದ ಚಾಲನೆಯಿಂದಾಗಿ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ.
 
ದುರ್ಘಟನೆಯ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಮಕ್ಕಳ ಕಿರುಚಾಟವನ್ನು ಕೇಳಿ ಓಡಿ ಬಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ ಜತೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 
ಬಸ್ ಕಂದಕಕ್ಕೆ ಉರುಳುವ ಮುನ್ನ ಒಬ್ಬ ವಿದ್ಯಾರ್ಥಿ ಮಾತ್ರ ಕೆಳಕ್ಕೆ ಹಾರಿ ಅಪಾಯದಿಂದ ಪಾರಾಗಿದ್ದಾನೆ.
 
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಆವೇಶ, ಉದ್ವೇಗಕ್ಕೆ ಒಳಗಾಗದಿರಿ: ಸಿಎಂ ಸಿದ್ದರಾಮಯ್ಯ ಕರೆ