Publish Date: Thu, 04 Oct 2018 (09:36 IST)
Updated Date: Thu, 04 Oct 2018 (09:37 IST)
ಭೋಪಾಲ್: ಮಧ್ಯಪ್ರದೇಶದ ದೇವಾಲಯದ ಒಳಗೆ ಇಬ್ಬರು ಪೂಜಾರಿಗಳು ಸಿಹಿ ತಿನಿಸಿನ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಹೀನ ಕೃತ್ಯ ನಡೆದಿದೆ.
ಬಡ ರೈತನ ಪುತ್ರಿಯನ್ನು ದೇವಾಲಯದ ಒಳಗೆ ಕರೆಸಿ ಸಿಹಿ ತಿನಿಸಿನ ಆಸೆ ತೋರಿಸಿ ಲೈಂಗಿಕ ಶೋಷಣೆ ಮಾಡಿದ ಪೂಜಾರಿಗಳು ಆಕೆಯನ್ನು ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿ ಮನೆಗೆ ಬಿಟ್ಟಿದ್ದಾರೆ ಎನ್ನಲಾಗಿದೆ.
ಆದರೆ ನೋವಿನಿಂದ ನರಳುತ್ತಿದ್ದ ಆಕೆಯನ್ನು ಗಮನಿಸಿದ ತಾಯಿ ಈ ಬಗ್ಗೆ ವಿಚಾರಣೆ ನಡೆಸಿದಾಗ ಘಟನೆಯ ಬಗ್ಗೆ ಮಗು ಹೆದರುತ್ತಲೇ ವಿವರಿಸಿದೆ. ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, 55 ವರ್ಷದ ರಾಜು ಪಂಡಿತ್ ಮತ್ತು 45 ವರ್ಷದ ಬಟೋಲಿ ಪ್ರಜಾಪತಿ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.