Select Your Language

Notifications

webdunia
webdunia
webdunia
webdunia

ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಹಣ ವಶಪಡಿಸಿಕೊಂಡ ವರದಿ ನಿರಾಕರಿಸಿದ ಐಟಿ

ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಹಣ ವಶಪಡಿಸಿಕೊಂಡ ವರದಿ ನಿರಾಕರಿಸಿದ ಐಟಿ
ನವದೆಹಲಿ , ಬುಧವಾರ, 2 ಆಗಸ್ಟ್ 2017 (10:50 IST)
ಆದಾಯ ತೆರಿಗೆ ಇಲಾಖೆ ಕರ್ನಾಟಕದ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ 39 ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸದಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಐಟಿ ಇಲಾಖೆ ಈ ವರದಿಗಳನ್ನ ನಿರಾಕರಿಸಿದೆ.

ಈ ಮಧ್ಯೆ, ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸ. ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ಬಗ್ಗೆ ಸ್ಪಷ್ಟಪಡಿಸಿರುವ ಐಟಿ ಇಲಾಖೆ, ಬೇರೆ ಶಾಸಕರ ಬಳಿ ಶೋಧ ನಡೆಸಿಲ್ಲ. ಡಿ.ಕೆ. ಶಿವಕುಮಾರ್`ಗೆ ಸಂಬಂಧಿಸಿದಂತೆ ಮಾತ್ರ ದಾಳಿ ನಡೆದಿದೆ.

ಇತ್ತ, ಈಗಲ್ ಟನ್ ರೆಸಾರ್ಟ್ ಮೇಲಿನ ದಾಳಿ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನ ಐಟಿ ಅಧಿಕಾರಿಗಳು ಸದಾಶಿವನಗರದ ನಿವಾಸಕ್ಕೆ ಕರೆತಮದಿದ್ದು, ವಿಚಾರಣೆ ನಡೆಸಲಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಸುಂದರ ಯುವತಿ ಪಕ್ಕದಲ್ಲಿ ಕೂರುವ ಕನಸಿಗೆ ಬಿತ್ತು ಕತ್ತರಿ!