Select Your Language

Notifications

webdunia
webdunia
webdunia
webdunia

ಭೀಕರ ಬಸ್ ದುರಂತಕ್ಕೆ 43 ಬಲಿ!

ಬಸ್ ಅಪಘಾತ
Shimla , ಬುಧವಾರ, 19 ಏಪ್ರಿಲ್ 2017 (15:27 IST)
ಶಿಮ್ಲಾ: ಇಲ್ಲಿನ ನೆರ್ವಾ ಎಂಬಲ್ಲಿ ನದಿಯೊಂದಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 43 ಮಂದಿ ಮೃತಪಟ್ಟ ಧಾರುಣ ಘಟನೆ ಇದೀಗ ವರದಿಯಾಗಿದೆ.

 
ಉತ್ತರಾಖಂಡ್-ಹಿಮಾಚಲ ಪ್ರದೇಶ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಹಿಮಾಚಲ ಪ್ರದೇಶದ ತುನಿ ಎಂಬಲ್ಲಿಂದ ಉತ್ತರಾಖಂಡ್ ನ ವಿಕಾಸ್ ನಗರ ಕಡೆಗೆ ಹೋಗುತ್ತಿದ್ದ ಬಸ್ ಇದಾಗಿದ್ದು, ಇದರಲ್ಲಿ 56 ಪ್ರಯಾಣಿಕರಿದ್ದರು ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪೈಕಿ 43 ಮಂದಿಯ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪರಿಹಾರ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ, ಗಂಗಾ, ತಿರಂಗಾಗಾಗಿ ಯಾವುದೇ ಶಿಕ್ಷೆಗೆ ಸಿದ್ದ: ಸಚಿವೆ ಉಮಾಭಾರತಿ