Select Your Language

Notifications

webdunia
webdunia
webdunia
webdunia

ಪಾನಿಪುರಿಗಾಗಿ ಬರ್ಬರ ಕೊಲೆ

ಪಾನಿಪುರಿಗಾಗಿ ಬರ್ಬರ ಕೊಲೆ
ನವದೆಹಲಿ , ಶುಕ್ರವಾರ, 26 ಆಗಸ್ಟ್ 2016 (17:00 IST)
ಕಳೆದ 15 ದಿನಗಳ ಹಿಂದೆ ವಾಯುವ್ಯ ದೆಹಲಿಯ ಭಲ್ಸ್ವಾ ಡೈರಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರದೇಶದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. 

ಆಗಸ್ಟ್ 4 ರಂದು ಈ ಹತ್ಯೆ ನಡೆದಿತ್ತು. ರಸ್ತೆ ಬದಿ ಅಂಗಡಿಯಿಂದ ಪಾನಿ ಪುರಿ ಕೊಳ್ಳುವ ವಿಷಯಕ್ಕೆ  ಸಂಬಂಧಿಸಿದಂತೆ ಮೂವರಲ್ಲಿ ಜಗಳ ಪ್ರಾರಂಭವಾಗಿರುವುದು ಸ್ಪಷ್ಟವಾಗಿದೆ.
 
ಇರ್ಫಾನ್ ಎಂಬ ಯುವಕ ತನ್ನ ಗೆಳೆಯನ ಜತೆ ಮದ್ಯದಗಂಡಿಗೆ ಸಮೀಪ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದ. ಇರ್ಫಾನ್ ಗೆಳೆಯನಿಗಾಗಿ ಪಾನಿ ಪುರಿ ಅಂಗಡಿಯ ಸಮೀಪ ಕಾಯುತ್ತಿದ್ದಾಗ ಇಬ್ಬರು ಯುವಕರು 
ಅಲ್ಲಿಗೆ ಬಂದು ತಮಗೆ ಮೊದಲು ಪಾನಿ ಪುರಿ ನೀಡಬೇಕೆಂದು ಜಗಳ ತೆಗೆದಿದ್ದಾರೆ. ಅವರಿಬ್ಬರು ಮತ್ತು ಇರ್ಫಾನ್ ನಡುವೆ ಪ್ರಾರಂಭವಾದ ವಾಗ್ವಾದ ತಾರಕಕ್ಕೇರಿದೆ. ಕೋಪದ ಭರದಲ್ಲಿ ಅವರಿಬ್ಬರು ಇರ್ಫಾನ್ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ್ದಾರೆ. ಬಳಿಕ ಆತನನ್ನು ಸ್ವಲ್ಪ ದೂರದಲ್ಲಿ ಕೊಂಡೊಯ್ದು ಎಸೆದಿದ್ದಾರೆ. 
 
ಪ್ರಜ್ಞೆ ಕಳೆದುಕೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಇರ್ಫಾನ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಘಟನೆ ನಡೆದ 15 ದಿನಗಳ ನಂತರ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. 
 
ಸ್ವರೂಪ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಷ್ಟವಾಗದ ವ್ಯಕ್ತಿಯೊಂದಿಗೆ ವಿವಾಹ: ಪತಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಮಹಾಪತ್ನಿ