Webdunia - Bharat's app for daily news and videos

Install App

ಆಂಧ್ರ ಸಿಎಂಗಿಂತ 18 ತಿಂಗಳ ಮೊಮ್ಮಗ ಶ್ರೀಮಂತ

Webdunia
ಗುರುವಾರ, 20 ಅಕ್ಟೋಬರ್ 2016 (15:14 IST)
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗಿಂತ ಅವರ 18 ತಿಂಗಳ ಮೊಮ್ಮಗ ಹೆಚ್ಚು ಶ್ರೀಮಂತರಂತೆ. ಹೌದು ಇದು ಸತ್ಯ. ನಾಯ್ಡು ಪುತ್ರ, ದೇವಾಂಶ ತಂದೆ, ತೆಲುಗು ದೇಶಂ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಬುಧವಾರ ಕುಟುಂಬದ ಆಸ್ತಿ ವಿವರವನ್ನು ಘೋಷಿಸಿದ್ದು, ಸಿಎಂ ನಾಯ್ಡು ಅವರಿಗಿಂತ ಅವರ ಮೊಮ್ಮಗನೇ ಹೆಚ್ಚು ಆಸ್ತಿ ಹೊಂದಿರುವುದು ಬಹಿರಂಗವಾಗಿದೆ. 

ಹಳೆಯ ಅಂಬಾಸಿಡರ್ ಕಾರ್ ಒಳಗೊಂಡಂತೆ ಚಂದ್ರಬಾಬು ನಾಯ್ಡು ಅವರ ಒಟ್ಟು ಆಸ್ತಿ 3.73 ಕೋಟಿ ಜತೆಗೆ 3.6 ಕೋಟಿ ಸಾಲ ಕೂಡ ಇದೆ, ದೇವಾಂಶ ಹೊಂದಿರುವ ಒಟ್ಟು ಆಸ್ತಿ 11.57 ಕೋಟಿ. 
 
ದೇವಾಂಶು ಅಜ್ಜಿ, ಚಂದ್ರಬಾಬು ನಾಯ್ಡು ಪತ್ನಿ ಭುವನೇಶ್ವರಿಯಿಂದ 9.17 ಕೋಟಿ ಮತ್ತು ತಾಯಿಯ ತಂದೆ, ನಟ ಬಾಲಕೃಷ್ಣ ಅವರಿಂದ 2.4 ಕೋಟಿ ರೂಪಾಯಿ ಆಸ್ತಿಯನ್ನು ಪಡೆದಿದ್ದಾನೆ. 
 
ಲೋಕೇಶ್ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ ಹೈದರಾಬಾದಿನ ಜುಬಿಲಿ ಹಿಲ್ಸ್‌ನಲ್ಲಿರುವ ಅವರ ತಂದೆಯ ನಿವಾಸದ ಮೌಲ್ಯ 3.68ಕೋಟಿ, ಹಳೆಯ ಅಂಬಾಸಿಡರ್ ಕಾರ್ ಬೆಲೆ 1.52ಲಕ್ಷ. ಬ್ಯಾಂಕ್ ಖಾತೆಯಲ್ಲಿರುವ ಹಣ 3.59 ಲಕ್ಷ ರೂಪಾಯಿ.
 
ನಾಯ್ಡು ಪತ್ನಿ ಭುವನೇಶ್ವರಿ ಅವರು 38.66 ಕೋಟಿ ಆಸ್ತಿ, 13 ಕೋಟಿ ಸಾಲ, ನಾರಾ ಲೋಕೇಶ್  14.50 ಕೋಟಿ ಆಸ್ತಿ, 6.35ಕೋಟಿ ಸಾಲ, ಲೋಕೇಶ್ ಪತ್ನಿ ಬ್ರಹ್ಮಿಣಿ 5.4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
 
ನಾಯ್ಡು ಕುಟುಂಬ ಹೆರಿಟೇಜ್ ಫುಡ್ಸ್ ಉದ್ಯಮವನ್ನು ನಡೆಸುತ್ತಿದ್ದು ಇದರ ವಾರ್ಷಿಕ ವಹಿವಾಟು 2,321 ಕೋಟಿ. ಪ್ರಸಕ್ತ ವರ್ಷ ಕಂಪನಿ ಗಳಿಸಿರುವ ಲಾಭ 55ಕೋಟಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ನಂದಿಬೆಟ್ಟದಿಂದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಶಿಫ್ಟ್: ಮಾವು ಬೆಳೆಗಾರರ ಕೋಪಕ್ಕೆ ಹೆದರಿದ ಸರ್ಕಾರ

ಕರ್ನಾಟಕದಲ್ಲಿ ಕೆಲಸದ ಅವಧಿ 10 ಗಂಟೆಗೆ ಹೆಚ್ಚಿಸಬೇಕೇ, ನಿಮ್ಮ ಅಭಿಪ್ರಾಯವೇನು

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಚಿವ ಅರೆಸ್ಟ್: ಕಾರಣವೇನು ಗೊತ್ತಾ

ಮುಂದಿನ ಸುದ್ದಿ
Show comments