ಉತ್ತರ ಪ್ರದೇಶದ ಅಮೇಥಿಯಲ್ಲಿ ಬುಧವಾರ ಸಂಪೂರ್ಣ ದೇಶವೇ ಬೆಚ್ಚಿ ಬೀಳಿಸುವ ಘನಘೋರ ಘಟನೆ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಒಂದೇ ಕುಟುಂಬದ 11 ಜನರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಬಜಾರ್ಶುಕುಲ್ ಠಾಣಾ ವ್ಯಾಪ್ತಿಯ ಪಶ್ಚಿಮ ಮೋಹನ್ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಮೃತರಲ್ಲಿ 8 ಮಂದಿ ಮಕ್ಕಳು ಇಬ್ಬರು ಮಹಿಳೆಯರು ಮತ್ತು ಒಬ್ಬ ಮಹಿಳೆಯರಿದ್ದಾರೆ. ಕುಟುಂಬದ ಯಜಮಾನನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕುಟುಂಬದ ಮತ್ತಿಬ್ಬರಿಗೆ ವಿಷ ಪ್ರಾಶನವಾಗಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘೋರ ಕೃತ್ಯವನ್ನು ನಡೆಸಿದವರು ಯಾರು, ಏಕೆ ನಡೆಸಲಾಯ್ತು ಎಂಬುದು ರಹಸ್ಯವಾಗಿಯೇ ಇದೆ.
ಅಮೇಥಿ ನೆಹರು-ಗಾಂಧಿ ಮನೆತನದ ರಾಜಕೀಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ