Select Your Language

Notifications

webdunia
webdunia
webdunia
webdunia

ಉದ್ಧಟತನ ಮುಂದುವರೆಸಿದ ಪಾಕ್

ಉದ್ಧಟತನ ಮುಂದುವರೆಸಿದ ಪಾಕ್
ಜಮ್ಮು ಮತ್ತು ಕಾಶ್ಮೀರ , ಶುಕ್ರವಾರ, 21 ಅಕ್ಟೋಬರ್ 2016 (12:10 IST)
ಪಾಕಿಸ್ತಾನ ಮತ್ತೆ ಮತ್ತೆ ಕದನವಿರಾಮ ಉಲ್ಲಂಘಿಸುತ್ತಿದ್ದು ಇಂದು ಕೂಡ ಕಣಿವೆ ನಾಡಿನ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಎರಡು ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಬಿಎಸ್ಎಫ್ ಯೋಧ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕತ್ವಾ ಜಿಲ್ಲೆ ಹೀರಾ ಸೆಕ್ಟರ್‌ನಲ್ಲಿ ಪಾಕ್ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನ 2 ನೇ ಬಾರಿಗೆ ಕದನ ವಿರಾಮವನ್ನು ಉಲ್ಲಂಘಿಸಿದೆ. 
 
ಅಂತರಾಷ್ಟ್ರೀಯ ಗಡಿ ರೇಖೆಯನ್ನು ದಾಟಿ ಭಾರತ ಸರ್ಜಿಕಲ್ ಸ್ಟ್ರೈಕ್ ಕೈಗೊಂಡ ಮೇಲೆ ತಾನೇನು ಮಾಡಬೇಕೆಂದು ಪಾಕಿಸ್ತಾನಕ್ಕೆ ತಿಳಿಯುತ್ತಿಲ್ಲ. ಹೀಗಾಗಿ ತನ್ನ ಇರುವಿಕೆಯನ್ನು ತೋರಿಸಲು ಪದೇ ಪದೇ ಕದನವಿರಾಮವನ್ನು ಉಲ್ಲಂಘಿಸುತ್ತಿದೆ.
 
ಪಾಕಿಸ್ತಾನದ ಈ ಉದ್ಧಟನಕ್ಕೆ ಭಾರತದ ತಕ್ಕ ಪ್ರತ್ಯುತ್ತರವನ್ನು ಕೊಡುತ್ತಿದ್ದು ನಮ್ಮ ಸೈನಿಕರ ಗುಂಡಿಗೆ ಪಾಕ್ ಯೋಧನೊಬ್ಬ ಮೃತ ಪಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರುದ್ರೇಶ್ ಪ್ರಕರಣ ತನಿಖೆಗಾಗಿ ಎನ್‌ಐಎಗೆ ನೀಡಿ: ಯಡಿಯೂರಪ್ಪ