Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಧರ್ಮ ಬೆರೆಸಬೇಡಿ: ರಾಮದೇವ್‌ಗೆ ಕಾಂಗ್ರೆಸ್

ರಾಜಕೀಯಕ್ಕೆ ಧರ್ಮ ಬೆರೆಸಬೇಡಿ: ರಾಮದೇವ್‌ಗೆ ಕಾಂಗ್ರೆಸ್
ನವದೆಹಲಿ , ಮಂಗಳವಾರ, 1 ಮಾರ್ಚ್ 2011 (09:06 IST)
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ರಾಜಕೀಯದಲ್ಲಿ ಧರ್ಮವನ್ನು ಬೆರೆಸದಂತೆ ಸಲಹೆ ನೀಡಿದೆ.

ಬಾಬಾ ರಾಮದೇವ್ ಧಾರ್ಮಿಕ ಸಂಪ್ರದಾಯಗಳನ್ನು ಬಳಸಿಕೊಂಡು ಕೀಳು ರಾಜಕೀಯ ಮಾಡುವ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ. ಈ ರೀತಿಯಾಗಿ ಕಾಷಾಯ ಧಾರಿಗಳು ತಮ್ಮ ಸ್ಥಾನವನ್ನು ಸಮಾಜದಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಟೀಕಿಸಿದರು.

ಖಾವಿಧಾರಿಗಳು ರಾಜಕೀಯದೊಂದಿಗೆ ಧರ್ಮವನ್ನು ಬೆರೆಸುತ್ತಿರುವುದು ಸಮರ್ಥನೀಯವಲ್ಲ. ಹಾಗೆ ಮಾಡುವುದರಿಂದ ಸಮಾಜದಲ್ಲಿ ಮತ್ತು ಧಾರ್ಮಿಕ ಸಮೂಹಗಳಲ್ಲಿ ತಮ್ಮ ಗೌರವಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಾರೆ ಎಂದು ಎಚ್ಚರಿಸಿದರು.

ಹಗರಣಗಳಿಗೆ ಕಾಂಗ್ರೆಸ್ಸೇ ಕಾರಣ: ರಾಮದೇವ್
ಕಪ್ಪುಹಣದ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಿರುವ ರಾಮದೇವ್, ದೇಶದಲ್ಲಿನ ಶೇ.99 ಹಗರಣಗಳಿಗೆ ಕಾಂಗ್ರೆಸ್ ಹೊಣೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಅತಿ ಭ್ರಷ್ಟ ಸರಕಾರ ಎಂದು ಜರೆದರು. ಈ ದೇಶದಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ದೇಶದ ಶೇ.99ರಷ್ಟು ಭ್ರಷ್ಟಾಚಾರಕ್ಕೆ ಜವಾಬ್ದಾರಿ ಎಂದು ಆರೋಪಿಸಿದರು.

ದೇಶವು ಭ್ರಷ್ಟಾಚಾರ ಮತ್ತು ಕಪ್ಪುಹಣದಿಂದಾಗಿ ಭಾರೀ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದನ್ನು ತಡೆಗಟ್ಟಲು ಗಂಭೀರವಾಗಿ ಯೋಚಿಸಬೇಕು ಮತ್ತು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಹೇಗಾದರೂ ಮಾಡಿ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಬೇಕು. ದೇಶದಲ್ಲಿನ ವಿದೇಶಿ ಬ್ಯಾಂಕುಗಳ ಪರವಾನಗಿಗಳನ್ನು ತಕ್ಷಣದಿಂದಲೇ ರದ್ದು ಮಾಡಬೇಕು. ಮಾರಿಷಸ್ ದಾರಿಯನ್ನು ಕೂಡ ಬಂದ್ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಇದೇ ಸಂದರ್ಭದಲ್ಲಿ ರಾಮದೇವ್ ಆಗ್ರಹಿಸಿದ್ದಾರೆ.

Share this Story:

Follow Webdunia kannada