Select Your Language

Notifications

webdunia
webdunia
webdunia
webdunia

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ
ಬೀದರ್ , ಸೋಮವಾರ, 15 ಏಪ್ರಿಲ್ 2019 (14:21 IST)
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ ಎದುರಾಗಿದೆ.

ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಟ್ಟೆಯಲ್ಲಿ ಐದು ನೂರು ರೂ. ಗಳ ನೋಟನ್ನು ಹಾಕಿದ್ದು ಈಶ್ವರ ಖಂಡ್ರೆಗೆ ಸಂಕಷ್ಟ ತಂದೊಡ್ಡಿದೆ.

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗಾಂಧಿ ಗಂಜ್ ನಲ್ಲಿ ಸಭೆ ನಡೆಸಿದ್ರು. ಆ ನಂತರ ಗಣೇಶ ದೇವಸ್ಥಾನದ ದರ್ಶನ ಮಾಡಿದ್ರು. ಅಲ್ಲಿ ಅರ್ಚಕರ ತಟ್ಟೆಯಲ್ಲಿ ಐದು ನೂರು ರೂಪಾಯಿ ನೋಟನ್ನು ಕಾಣಿಕೆಯಾಗಿ ಖಂಡ್ರೆ ಹಾಕಿದ್ರು.

ಇದು ಟಿವಿಗಳಲ್ಲಿ ಪ್ರಸಾರವಾಗಿದೆ. ಹೀಗಾಗಿ ಬೆಂಗಳೂರು ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.

ಬೀದರ್ ಚುನಾವಣೆ ಆಯೋಗಕ್ಕೆ ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಚುನಾವಣಾ ಆಯೋಗ ತನಿಖೆ ಮಾಡಿ ಬೆಂಗಳೂರು ಚುನಾವಣಾ ಆಯೋಗಕ್ಕೆ ವರದಿ ಕಳಿಸಬೇಕಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕಟೌಟ್ ಗೆ ಹಾಲಿನ ಅಭಿಷೇಕ