Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ಮುಂದುವರಿದ ಮಳೆ ಅಬ್ಬರ

ಹಾಸನದಲ್ಲಿ ಮುಂದುವರಿದ ಮಳೆ ಅಬ್ಬರ
ಹಾಸನ , ಶುಕ್ರವಾರ, 12 ಆಗಸ್ಟ್ 2022 (17:51 IST)
ಮಲೆನಾಡು ಭಾಗದಲ್ಲಿ ಮುಂದುವರೆದ ಭಾರೀ ಮಳೆ ಅಬ್ಬರದಿಂದ ಹಾಸನ‌ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಜಂಬರಡಿ ಕಿರು ಸೇತುವೆ ಜಲಾವೃತವಾಗಿದೆ. ಮಳೆ ಅವಾಂತರದಿಂದ ಚಿತ್ತನ ಹಳ್ಳ ಉಕ್ಕಿ ಹರಿದು ರಸ್ತೆ ಮೇಲೆ ನೀರು ಹರಿಯುತ್ತಿದೆ. ನೆನ್ನೆ ಭಾರಿ ಪ್ರಮಾಣದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರು ಶಾಲಾ ಮಕ್ಕಳನ್ನ ಜೆಸಿಬಿ ಮೂಲಕ ರಸ್ತೆ ದಾಟಿಸಿದ್ದಾರೆ. ಪ್ರವಾಹ ಮುಂದುವರೆದ ಹಿನ್ನೆಲೆ  ಮುಂಜಾಗ್ರತಾ ಕ್ರಮವಾಗಿ ಇಂದು ಸಕಲೇಶಪುರ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸತತವಾಗಿ 12 ದಿನಗಳಿಂದ ಅಬ್ಬರಿಸುತ್ತಿರೋ ಮಳೆಯಿಂದ ಚಿತ್ತನ ಹಳ್ಳ ಉಕ್ಕಿ ಹರಿದ ಪರಿಣಾಮ‌ ಹಾನಬಾಳು ಮತ್ತು ಜಂಬರಡಿ, ರಾಗಿಗುಡ್ಡ ನಡುವೆ ಸಂಚರಿಸಲು ಜನರ ಪರದಾಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆ