Webdunia - Bharat's app for daily news and videos

Install App

ಕೆ ಎಂ ಎಫ್ ಕಡೆಯಿಂದ ಕ್ರಿಸ್ ಮಸ್ ಪ್ರಯುಕ್ತ ಸಿಹಿತಿಂಡಿಗೆ ರಿಯಾಯಿತಿ....!

Webdunia
ಸೋಮವಾರ, 19 ಡಿಸೆಂಬರ್ 2022 (18:35 IST)
ಮುಂಬರುವ ಕ್ರಿಸ್ಮಸ್, ಹೊಸವರ್ಷ, ಸಂಕ್ರಾಂತಿ ಹಬ್ಬಕ್ಕಾಗಿ ಗ್ರಾಹಕರಿಗೆ ಸಿಹಿ ಪದಾರ್ಥಗಳನ್ನು ರಿಯಾಯತಿ ದರದಲ್ಲಿ ನೀಡಿ ತಿಂಡಿ ಪ್ರಿಯರಿಗೆ ಮತ್ತಷ್ಟು ಖುಷಿಕೊಡಬೇಕು ಅಂತ ಕೆಎಂಎಫ್ ಚಿಂತನೆ  ಮಾಡಿ ಈ ಹಿನ್ನೆಲೆ ಇಂದು    ನಂದಿನಿ ಸಿಹಿ ಉತ್ಸವ ಯೋಜನೆ ಗೆ ಚಾಲನೆ ನೀಡಲಾಯಿತು. ಚಾಮರಾಜಪೇಟೆಯಲ್ಲಿರುವ  ನಂದಿನಿ ಪಾರ್ಲರ್ನಲ್ಲಿ ಸಾಂಕೇತಿಕವಾಗಿ  ಚಾಲನೆ ನೀಡಿದ್ರು.ಇಂದಿನಿಂದ‌ ಒಂದು ತಿಂಗಳ ವರೆಗೆ ಎಲ್ಲಾ ನಂದಿನಿ ಸಿಹಿ ಉತ್ಪನ್ನ ಗಳಾದ  ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡ,‌ಕೇಸರ್ ಪೇಡ, ಏಲಕ್ಕಿ‌ ಪೇಡ, ಸಿರಿಧಾನ್ಯ ಲಡ್ಡು, ಹಾಲಿನ ಪುಡಿ, ಜಾಮೂನ್ ರಸಗುಲ್ಲಾ ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನ ಗಳ ಮೇಲೆ‌ ೨೦% ರಿಯಾಯಿತಿ ದರದಲ್ಲಿ ಇದೇ ಪ್ರಥಮ ಬಾರಿಗೆ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ.ಈ‌ ಬಾರಿಯ ಗ್ರಾಹಕರ ಅಭಿರುಚಿಯನ್ನ ಪರಿಗಣಿಸಿ ಹೊಸದಾಗಿ ಖೋವಾ, ಬಾದಾಮ್‌ ರೋಲ್,ಖೋವಾ ಚಾಕೋನಟ್ಟಿ ರೋಲ್, ಗೋಡಂಬಿ ರೋಲ್, ಕಲಾಕಂದ್, ಲಾಡು ಸೇರಿ ಅನೇಕ ಉತ್ಪನ್ನಗಳನ್ನ ಸೇರ್ಪಡೆ ಮಾಡಲಾಗಿದೆ.ಕರ್ನಾಟಕ  ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಬಿಸಿ ಸತೀಶ್  ಸಾಂಕೇತಿಕ ವಾಗಿ ಚಾಲನೆ ನೀಡಿದ ನಂತರ ಮಾತನಾಡಿ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ರುಚಿಕರ ತಿಂಡಿಗಳನ್ನ ನೀಡಿ‌ ಗ್ರಾಹಕರಿಗೆ ಇನ್ನಷ್ಟು ‌ಹತ್ತಿರವಾಗಲಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದ ಹವಾಮಾನ ವರದಿ ಇಲ್ಲಿದೆ

ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಪತಿಯ ಅಂತ್ಯಕ್ರಿಯೆ ವೇಳೆ ಪತ್ನಿಗಾಗಿದ್ದೇನು

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ: ಪ್ರತಾಪಸಿಂಹ ಬೆನ್ನಲ್ಲೇ ಯತ್ನಾಳ್‌ ಆಕ್ಷೇಪ

ಆಗ ಬಾಯಿಮುಚ್ಚಿಕೊಂಡಿದ್ದವರು ಈಗ ಲಾಭಕ್ಕೆ ಕಾಯುತ್ತಿದ್ದಾರೆ: ಚಲುವರಾಯಸ್ವಾಮಿ ಆಕ್ರೋಶ

ಬುರುಡೆ ಪ್ರಕರಣದಲ್ಲಿ ಸಾಮಾನ್ಯಜ್ಞಾನ ಬಳಸಿದ್ದರೆ ಇಷ್ಟೊಂದು ರಾದ್ಧಾಂತ ಆಗುತ್ತಿರಲಿಲ್ಲ: ರಾಜಣ್ಣ

ಮುಂದಿನ ಸುದ್ದಿ
Show comments