Select Your Language

Notifications

webdunia
webdunia
webdunia
webdunia

ಸಿದ್ರಾಮಯ್ಯನವರೇ ಖಜಾನೆ ಲೂಟಿ ಮಾಡಿ ಹಣ ಹಂಚುತ್ತಿದ್ದೀರಾ? ಯಡಿಯೂರಪ್ಪ

ಸಿದ್ರಾಮಯ್ಯನವರೇ ಖಜಾನೆ ಲೂಟಿ ಮಾಡಿ ಹಣ ಹಂಚುತ್ತಿದ್ದೀರಾ? ಯಡಿಯೂರಪ್ಪ
ನಂಜನಗೂಡು , ಗುರುವಾರ, 6 ಏಪ್ರಿಲ್ 2017 (19:45 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖಜಾನೆಯನ್ನು ಲೂಟಿ ಮಾಡಿ ಉಪಚುನಾವಣೆಯಲ್ಲಿ ಗೆಲ್ಲಲು ಹಣ ಹಂಚುತ್ತಿದ್ದೀರಾ?ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
 
ಹಣ, ಅಧಿಕಾರದ ಧಿಮಾಕು, ಮದದಿಂದ ಮೆರೆಯುತ್ತಿರುವ ನಿಮಗೆ ಉಪಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಬಿಜೆಪಿ ಬಹಿರಂಗ ಸಮನಾವೇಶದಲ್ಲಿ ಮಾತನಾಡಿದ ಅವರು,  ಉಪಚುನಾವಣೆಯಲ್ಲಿ ಗೆಲ್ಲಲು ಹಣ ಹಂಚುತ್ತಿದ್ದಾರೆ. ಸರಕಾರ ನಡೆಸುವ ಯೋಗ್ಯತೆ ನಿಮಗಿಲ್ಲ. ವಿಧಾನಸೌಧದಲ್ಲಿ ನಿಮಗೆ ಬೆಲೆಯಿದೆಯೇ? ಅಧಿಕಾರಿಗಳು ನಿಮ್ಮ ಮಾತನ್ನು ಕೇಳ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.
 
ನಾಳೆ ಸಂಜೆ ನಂಜನಗೂಡು ಕ್ಷೇತ್ರದಿಂದ ಹೊರಡುತ್ತೇವೆ. ಉಪಚುನಾವಣೆ ಗೆದ್ದ ಬಳಿಕ ಕ್ಷೇತ್ರಕ್ಕೆ ಮರಳುತ್ತೇವೆ. ವಿಧಾನಸಭಾ ಕ್ಷೇತ್ರದ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಭ್ರಮ ಆಚರಿಸೋಣ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಕನಿಷ್ಠ 25 ಸಾವಿರ ಪರಿಹಾರ ನೀಡಿ: ಕುಮಾರಸ್ವಾಮಿ